ಹೊಳಲ್ಕೆರೆ ತಾಲ್ಲೂಕಿನ ಅರೆಹಳ್ಳಿ ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಶಿವಪುರ ಇವರ ಸಂಯುಕ್ತಾಶ್ರಯದಲ್ಲಿ ಅರೆಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ವಿರೋದಿ ಮಾಸಾಚರಣೆ.. ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿಗಳು ಅರೆಹಳ್ಳಿ ಗ್ರಾಮದ ಬೀದಿಗಳಲ್ಲಿ ಬ್ಯಾನರ್ ಇಡಿದಯ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿದರು. ಡಾ. ಶರತ್ ಮಾತನಾಡಿ ಡೆಂಗ್ಯೂ ಬಗ್ಗೆ ಬಯ ಬೇಡ ಜನರು ಎಚ್ಚರಿಕೆ ವಹಿಸಿ ನಿಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಚತೆ ಇಂದ ಇಟ್ಟುಕೊಂಡರೆ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ ಮಳೆ ಬಂದಾಗ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಇವು ಮೊಟ್ಟೆ ಇಟ್ಟು ಇನ್ನಷ್ಟು ಸೊಳ್ಳೆಗಳು ಜಾಸ್ತಿಯಾಗುತ್ತವೆ. ಸೊಳ್ಳೆಗಳು ಕಡಿದರೆ ಡೆಂಗ್ಯೂ ಚಿಕನ್ ಗುನ್ಯಾಗಳಂತ ಖಾಯಿಲೆಗಳು ಬರುತ್ತವೆ. ಆದ್ದರಿಂದ ನೀರು ನಿಲ್ಲದಂತೆ ಮನೆಯ ಸುತ್ತಮುತ್ತ ಸ್ವಚ್ಚತೆಯಿಂದ ಇಡಿ ನೀರು ನಿಲ್ಲದಂತೆ. ಶುದ್ದವಾದ ನೀರನ್ನು ಕುಡಿಯಿರಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಟಿ ಬಿ ರೋಗಿಗಳಿಗೆ ಪಂಚಾಯತಿ ವತಿಯಿಂದ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಯಿತು, ಗ್ರಾಮ ಪಂಚಾಯತಿ ಅಧ್ಯಕ್ಷರಾದ
ಜಿ .ಬಿ. ಪಾಲೆಗೌಡ, ಶ್ರೀಮತಿ ಸರೋಜಾ ಬಿ ಕಾಬ್ಲಿ ಉಪಾಧ್ಯಕ್ಷರು, ಸದಸ್ಯರು ಗಳಾದ ಸುರೇಶ್,ಶೃತಿ ಕೆ ಎಸ್, ರಂಗನಾಥ ಪಡಿಯಕ್ಕಿ,ಶಿವಣ್ಣ ಆರ್,ಶಿವಣ್ಣ ಅವಳಿಹಟ್ಟಿ,ಮಂಜಣ್ಣ ಜೈಪುರ, ಓಬಣ್ಣ, ಮೀನಾಕ್ಷಮ್ಮ, ಜಯಲಕ್ಷ್ಮಿ,ಲೋಕಾನಾಯ್ಕ, ಲಕ್ಷ್ಮೀದೇವಿ ಪಿ.ಡಿ.ಒ.ಕೃಷ್ಣಮೂರ್ತಿ, ಹಾಗೂ ಗ್ರಾಪಂ ಸಿಬ್ಬಂದಿ ವರ್ಗ. ಹಾಗೂ ಶಾಲಾ ಶಿಕ್ಷಕರು ಆಶಾ ಕಾರ್ಯಕರ್ತರು ಸೇರಿದಂತೆ ಜಿಲ್ಲಾ ಕ್ಷಯರೋಗ ಮೇಲ್ವಿಚರಕರಾದ, ಯತೀಶ್, ಜಿಸ್ ಶರತ್ ಡಾ. ಪ್ರಸಾದ್ ಶಿವಪುರ ತಾಲೂಕ್ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030