ವಿಶ್ವ ಮಾದಕ ವಸ್ತು ವಿರೋಧಿ ದಿನ ಮತ್ತು ಸ್ವಾಸ್ತೆ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮ ಆಯೋಜನೆ…ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಹೊನ್ನಾಳಿ ತಾಲೂಕು ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ದಾವಣಗೆರೆ ಜಿಲ್ಲೆ ಇವರ ಸಹಯೋಗದಲ್ಲಿ ಗೋವಿನಕೋವಿ ವಲಯದ ಸರಕಾರಿ ಪ್ರೌಢ ಶಾಲೆ MG ಹಳ್ಳಿ- ಕೋಟೆಹಾಳ ಇಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನ ಮತ್ತು ಸ್ವಾಸ್ತೆ ಸಂಕಲ್ಪ ದಿನಾಚರಣೆಯ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಈ ಕಾರ್ಯಕ್ರಮವನ್ನು ಅಖಿಲ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷರಾಧ ಶ್ರೀ ಸುರೇಶ ಹೊಸಕೇರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಿಗಳಿಗೆ ಸ್ವಾಸ್ತೆ ಸಮಾಜದ ನಿರ್ಮಾಣದಲ್ಲಿ ಪೂಜ್ಯರು ನೀಡಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಸಿದ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ B L ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಅರೋಗ್ಯ ಸುಧಾರಣೆ ಯೋಗ ವ್ಯಾಯಾಮವನ್ನು ತಮ್ಮ ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಶಿಲ್ಪಾ ವೈಧ್ಯಾಧಿಕಾರಿಗಳು ಆಯುರ್ವೇದ ಆಸ್ಪತ್ರೆ MG ಹಳ್ಳಿ ಇವರು ಮಾದಕ ವಸ್ತುಗಳ ಸೇವನೆಯಿಂದ ಇಂದಿನ ಯುವಕ ಯುವತಿಯರು ತಮ್ಮ ಉತ್ತಮ ಭವಿಸ್ಯವನ್ನು ಹಾಳು ಮಾಡಿಕೊಂಡು ಜೀವನದಲ್ಲಿ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದೂ ವಿದ್ಯಾರ್ಥಿಗಳು ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ದೇಶದ ಸತಪ್ರಜೆಯಾಗಿ ರೂಪಾಗೊಳ್ಳಬೇಕೆಂದು ತಿಳಿಸಿದರು…
ವರದಿ. ಮ್ಯಾಗರ ಸಂತೋಷ, ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030