ಶ್ರೀ ರಾಮನಗರ (ಕೋಗಳಿ ತಾಂಡ)ದ ಚರಂಡಿಗಳಲ್ಲಿ ಗಲೀಜು ನೀರು ತುಂಬಿಕೊಂಡು ರಸ್ತೆ ಮೇಲೆ ಬರ್ತಾ ಇದ್ದು, ಗಬ್ಬು ವಾಸನೆ ಬರ್ತಾ ಇದೆ. ಅಕ್ಕಪಕ್ಕದ ಮನೆಯಲ್ಲಿ ಜನರು ವಾಸಿಸುವುದಕ್ಕೆ ತುಂಬಾ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ತುಂಬಾ ಸಂಕ್ರಾಮಿಕ ರೋಗಗಳು ಹರಡುತ್ತಿದ್ದು .ಹಾಗೇನೆ ನಮ್ಮ ಊರಿಗೆ ಸೇರಿದ ಕೆಲವು ಬೀದಿಗಳಲ್ಲಿ ಬಿದಿ ದೀಪಗಳನ್ನು ಹಾಕಿಸದೆ ಇರುತ್ತಾರೆ ಮತ್ತು ಕೋಡೆಹಳ್ಳಿ ರಸ್ತೆಯ ಮೇಲೆ ತಿಪ್ಪೆಗಳನ್ನು ಹಾಕಿರುತ್ತಾರೆ ಇದರಿಂದ ರಸ್ತೆಯ ಮೇಲೆ ವಾಹನಗಳು ಮತ್ತು ಜನರು ಓಡಾಡುವುದು ತುಂಬಾ ತೊಂದರೆ ಆಗ್ತಾ ಇದ್ದು ಈ ವಿಷಯವಾಗಿ ನಾವು ಅನೇಕ ಬಾರಿ ಮೌಖಿಕವಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಊರಿನ ಸದಸ್ಯರುಗಳಿಗೆ ಹಾಗೂ ಪಿಡಿಒ ಸರ್ ಗೆ ಹೇಳಿದರು ಕೂಡ ಯಾವುದೇ ರೀತಿಯ ಸ್ಪಂದನೆ ಇಲ್ಲದ ಕಾರಣ ಇವುಗಳನ್ನೆಲ್ಲವನ್ನು ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಮಾಲವಿ ಗ್ರಾಮ ಪಂಚಾಯತಿಯ ಪಿಡಿಒ ಗೆ ಮತ್ತು ಇ ಓ ಅವರಿಗೆ ಮನವಿ ನೀಡಲಾಯಿತು. ಒಂದು ವೇಳೆ ಈ ಸಮಸ್ಯೆಗಳನ್ನು 8 ದಿನಗಳಲ್ಲಿ ಬಗೆಹರಿಸದ್ದಿರೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಮಾಲವಿ ಗ್ರಾಮ ಪಂಚಾಯಿತಿ ಮುಂದೆ ಅನಿದಿಷ್ಟ ಅವಧಿ ಧರಣಿಯನ್ನು ಮಾಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ಹೇಳಿದರು…
ವರದಿ. ಜನಾರ್ದನ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030