ಬಸಿರಿ ಗಿಡಕ್ಕೆ ಮರು ಜೀವ ನೀಡಿದ ವನಸಿರಿ ತಂಡ.
ಸಿಂಧನೂರು : ಜೂನ್ 28. ಗೋನವಾರ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಸುಮಾರು 10 ರಿಂದ 15 ವರ್ಷದ ಬಸಿರಿ ಮರವೊಂದು ಗಾಳಿಮಳೆಗೆ ಸಿಲುಕಿ ನೆಲಕ್ಕುರಳಿತ್ತು. ಅದನ್ನು ಕಂಡ ವನಸಿರಿ ಫೌಂಡೇಶನ್ ರುವಾರಿಗಳಾದ ಅಮರೇಗೌಡ ಮಲ್ಲಾಪೂರ ಅವರು ಶಿಕ್ಷಕರ ಜೊತೆಗೆ ಮರ ಬೀಳಲು ಕಾರಣವನ್ನು ತಿಳಿದು ಚರ್ಚಿಸಿ ಅದಕ್ಕೆ ಮತ್ತೆ ಮರುಜೀವ ನೀಡಲು ವನಸಿರಿ ತಂಡ ಮುಂದಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ರವರು ಶಿಕ್ಷಕರಿಗೆ, ಮಕ್ಕಳಿಗೆ, ಊರಿನ ಯುವಕರಿಗೆ ಈ ಮರಕ್ಕೆ ಬೇರುಗಳಿರುವುದರಿಂದ ಮತ್ತೆ ಅದು ಚಿಗುರುತ್ತದೆ, ಅದರಿಂದ ನಮಗೆ ಹೆಚ್ಚಿನ ಶುದ್ಧ ಗಾಳಿ ದೊರೆಯುತ್ತದೆ,ಮತ್ತು ಬೃಹತ್ತಾಗಿ ಬೆಳೆಯುತ್ತದೆ. ಬೇಸಿಗೆ ಕಾಲದಲ್ಲಿ ಸುಮಾರು 40 ರಿಂದ 50 ಜನರು ಕುಳಿತು ನೆರಳು ಪಡೆದು ವಿಶ್ರಾಂತಿ ಪಡೆಯಬಹುದು ಆದ್ದರಿಂದ ಈ ಮರಕ್ಕೆ ನಾವುಗಳೆಲ್ಲರೂ ಮರುಜೀವ ನೀಡೋಣ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವನಸಿರಿ ತಂಡದ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು ಊರಿನ ಯುವಕರು ಅತ್ಯಂತ ಉತ್ಸಾಹಿಗಳಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಮರುಜನ್ಮ ನೀಡಿ ಹರ್ಷೋದ್ಗಾರ ಮೊಳಗಿದರು.
ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ತುಂಬಾ ಸಂತೋಷಗೊಂಡು ವನಸಿರಿ ತಂಡದ ಸದಸ್ಯರುಗಳಿಗೆ ದನ್ಯವಾದಗಳನ್ನು ತಿಳಿಸಿ ಬೀಳ್ಕೊಡಲಾಯಿತು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030