ಓಂ ಶ್ರೀ ಮಂಜುನಾಥಾಯ ನಮ :
ಇಂದು ಕಲ್ಮಲ ವಲಯದ ಶಾಖಪೂರ್ ಕಾರ್ಯಕ್ಷೇತ್ರದ.ಶ್ರೀ ದಂಡಗುಂಡ ಬಸವೇಶ್ವರ ದೇವಸ್ಥಾನದ ಉಗ್ರಾಣ ಕೊಠಡಿಯ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 100000 /DD ಸಹಾಯಧನ ಮಂಜೂರಾಗಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಮೂರ್ತಿ ಚನ್ನಯ್ಯಸ್ವಾಮಿಗಳು ಹಾಗೂ ಮಾನ್ಯ ಯೋಜನಾ ಧಿಕಾರಿಗಳಾದ ಚಂದ್ರಹಾಸ ಸರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ದಿನ ಮಾನ್ಯ ಯೋಜನಾಧಿಕಾರಿಗಳು ಊರಿನ ಗಣ್ಯರ ಸಮ್ಮುಖದಲ್ಲಿ DD ವಿತರಣೆ ಮಾಡಿ ಕ್ಷೇತ್ರದ ಹಿನ್ನೆಲೆ ಬಗ್ಗೆ ಈ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಾದ ಮಾಸಾಶನ. ಕೆರೆ ಅಭಿವೃದ್ಧಿ. ಜನಮಂಗಲ ಕಾರ್ಯಕ್ರಮ. ಸುಜ್ಞಾನ ನಿಧಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಊರಿನ ಗಣ್ಯರಾದ ಮಾಯಪ್ಪ ಗೌಡ. ಸುರೇಶ. ಹನುಮಂತಗೌಡ. ಸುರೇಶ ಗೌಡ. T ಮಲ್ಲಪ್ಪಗೌಡ. ಯಂಕಣ್ಣ ಗೌಡ, ವೀರಣ್ಣ ಗೌಡ,ರಮೇಶ ಗೌಡ ಮುತ್ತಣ್ಣ ಗೌಡ ,ನಟರಾಜ ,ಶರಣಪ್ಪ ಗೌಡ. ಬಸವರಾಜ ಗೌಡ ಮುತ್ತು ನಗೋಲಿ,ಮಾಲಪ್ಪ ಗೌಡ K,ಅನಿಲ ಕುಮಾರ ಹಾಗೂ ಅತನೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಬೆಟ್ಟಪ್ಪ ಗೌಡ ಹಾಗೂ ವಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು…
ವರದಿ. ನಾಗರಾಜ್, ವಿ, ರಾಯಚೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030