ಪುರಸಭೆ ಚುನಾವಣೆ: ಅಶಾಂತಿ ಭಂಗ ಆರೋಪದಡಿ ನಾಲ್ವರ ಬಂಧನ
ಗುಳೇದಗುಡ್ಡ: ಶುಕ್ರವಾರ ನಡೆದ ಸ್ಥಳೀಯ ಪುರಸಭೆ
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಿರೀಕ್ಷಿತ
ಫಲಿತಾಂಶಬಾರದೇ ಇದ್ದ ಪಕ್ಷದಲ್ಲಿ ಅಶಾಂತಿಯನ್ನು ಉಂಟು
ಮಾಡುವ ಉದ್ದೇಶ ಹಾಗೂ ಸಾರ್ವಜನಿಕರಲ್ಲಿ ಭಯವನ್ನುಂಟುಪಡಿಸಿ
ಶಾಂತತಾ ಭಂಗಪಡಿಸುವ ಉದ್ದೇಶದಿಂದ ತಮ್ಮ ಸಂಗಡ ವಾಹನ,
ಮಾರಕಾಸ್ತ್ರ ಗಳೊಂದಿಗೆ ಹೊಂಚುಹಾಕಿ ನಿಂತುಕೊಂಡ ಸಂದರ್ಭದಲ್ಲಿ
ಪೋಲಿಸರು ನಾಲ್ವರನ್ನು ಬಂಧಿಸಿಲಾಗಿದೆ. ಬಂಧಿತರಿoದ ಎರಡು
ವಾಹನಗಳು ಸೇರಿದಂತೆ ಕಬ್ಬಿಣದ ರಾಡ, ಕಲ್ಲು, ಕಟ್ಟಿಗೆ, ತಲವಾರ
ವಶಪಡಿಸಿಕೊಂಡು ಸ್ಥಳಿಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಎಂದು ಸ್ಥಳೀಯ ಪಿಎಸ್ಐ ಸಿದ್ದಪ್ಪ ಯಡಹಳ್ಳಿ ತಿಳಿಸಿದ್ದಾರೆ.
ಬಾಗಲಕೋಟೆ ನವನಗರದ ಶಿವು ಬಸವರಾಜ ಕೊಡಬಾಗಿ,
ವಿದ್ಯಾಗಿರಿಯ ಇಮಾಮ ಶಮಶುದ್ದೀನ ಕಳಸಿ, ಮುಚಗಂಡಿಯ
ವಿಶ್ವನಾಥ ಬಸವರಾಜ ಅಂಬಿಗೇರ, ನವನಗರದ ಮಹಮ್ಮದಲಿ ಸಲೀಂ
ಮಂಟೂರ ಅವರನ್ನು ಬಂಧಿಸಲಾಗಿದೆ. ನವನಗರದ ಸಮೀರ
ಮುಲ್ಲಾ, ಗದ್ದನಕೇರಿಯ ವಿಲಾಸ ರಾಠೋಡ, ನವನಗರದ
ಇಮ್ರಾನ ಗಾಡಿ, ಮುಚಗಂಡಿಯ ಸಮೀರ ಬಂದೇಸಾಬ ಚಿಮ್ಮಲಗಿ
ಪರಾರಿಯಾಗಿದ್ದು. ಈ ಆರೋಪಿಗಳ ಪತ್ತಗೆ ಪೋಲಿಸರು ಹುಡುಕಾಟ
ನಡೆಸಿದ್ದಾರೆ ಎಂದು ತಿಳಿಸಿದ್ದಾರೆ…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030