ಬಿಎಸ್‍ಎಫ್‍ನ 5ನೇ ಬಟಾಲಿಯನ್‍ಲ್ಲಿ ಸೇವೆಸಲ್ಲಿಸುತ್ತಿದ್ದ ತಾಲೂಕಿನ ಕಟಗೇರಿ ಗ್ರಾಮದ ಯೋಧ ಉಮೇಶ ನಿಧನ…!!!

Listen to this article

ಯೋಧ ಉಮೇಶ ಸಾವು
ಗುಳೇದಗುಡ್ಡ: ಬಿಎಸ್‍ಎಫ್‍ನ 5ನೇ ಬಟಾಲಿಯನ್‍ಲ್ಲಿ ಸೇವೆಸಲ್ಲಿಸುತ್ತಿದ್ದ ತಾಲೂಕಿನ ಕಟಗೇರಿ ಗ್ರಾಮದ ಯೋಧ ಉಮೇಶ ಅಖಂಡಪ್ಪ ಡಬಗಲ್ಲ (33) ಅವರು ಬುಧವಾರ ನಿಧನಹೊಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ ಅಖಂಡಪ್ಪ ಅವರು ಸೇನೆಯಲ್ಲಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧ ಪತ್ನಿ, ತಂದೆ, ತಾಯಿ, ಓರ್ವ ಪುತ್ರ ಸೇರಿಂದಂತೆ ಅಪಾರಬಂಧು ಬಳಗ ಅಗಲಿದ್ದಾರೆ. ಮೃತರ ಪಾರ್ಥಿವ ಶರೀರ ಶುಕ್ರವಾರ ಕಟಗೇರಿ ಗ್ರಾಮಕ್ಕೆ ಆಗಮಿಸಲಿದೆ.
ಕಟಗೇರಿ ಗ್ರಾಮದ ಯೋಧನ ಮನೆಗೆ ಗುರುವಾರ ಕಟಗೇರಿ ಗ್ರಾಮ ಅಡಳಿತಾಧಿಕಾರಿ ಎಂ.ಎಸ್. ಗುಡಿಸಾಗರ, ಪಿಡಿಓ ರಾಮಚಂದ್ರ ಮೇತ್ರಿ, ಕಂದಾಯ ನಿರೀಕ್ಷಕ ಎಸ್.ಎಸ್. ಜೋಗಿನ, ಪಿಎಸ್‍ಐ ರಾಜು ಬೀಳಗಿ, ಗ್ರಾಪಂ ಅಧ್ಯಕ್ಷ ಸುಮಿತ್ರಾ ದ್ಯಾವನ್ನವರ, ಉಪಾಧ್ಯಕ್ಷ ರಾಮಚಂದ್ರ ಡೋಣಿ, ಸದಸ್ಯರಾದ ಉಮೇಶ ಮೊಖಾಶಿ, ಬಿ.ಜಿ.ಪೂಜಾರ, ಟಿ,ಎಸ್. ಮುಖಾಶಿ, ಬಿ.ಎಸ್. ಹದ್ಲಿ, ಪಿ.ಕೆ. ಪಾಟೀಲ, ಡಿ.ಕೆ. ಮೇಟಿ ಮತ್ತಿತರರು ಭೇಟಿ ನೀಡಿದ್ದರು.
ಯೋಧನ ಸಾವಿನ ಸುದ್ದಿ ಕೇಳಿ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತು. ಬಂಧುಬಳಗ, ಗ್ರಾಮಸ್ಥರು ಯೋಧನ ಮನೆಗೆ ಭೇಟಿ ನೀಡಿ ಸ್ವಾಂತನ ಹೇಳುತ್ತಿದ್ದಾರೆ. ಯೋಧನ ಅಂತ್ಯಕ್ರೀಯೆ ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend