ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿ ಮುಂದೆ ನೂರಾರು ರೈತರು ಸೇರಿ ಪ್ರತಿಭಟನೆ…!!!

Listen to this article

ಕರ್ನಾಟಕ ಪ್ರಾಂತ ರೈತ ಸಂಘ ಜೇವರ್ಗಿ ತಾಲೂಕ ಸಮಿತಿ ವತಿಯಿಂದ ಸೊನ್ನ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿ ಮುಂದೆ ನೂರಾರು ರೈತರು ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಬಾಬು ಬಿ ಪಾಟೀಲ ಮಾತನಾಡಿ ಸಂಘಕ್ಕೆ 2021-22ರಲ್ಲಿ ಮಂಜೂರು ಆಗಿರುವ ರೂ 1440200 ರೂಪಾಯಿ ಮಂಜೂರು ಆಗಿರುತ್ತದೆ ಮಂಜೂರು ಆಗಿ ನಾಲ್ಕು ತಿಂಗಳು ಕಳೆದರು ಇಲ್ಲಿಯವರೆಗೂ ರೈತರಿಗೆ ಸಾಲ ನೀಡಿರುವದಿಲ್ಲ.

 

ಒಟ್ಟು 500 ರೈತರು ರೂ 1100/-ಸದಸ್ಯತ್ವ ಹಣ ಜಮಾ ಮಾಡಿ ಸದಸ್ಯರಾಗಿದ್ದಾರೆ ಹೊಸ ಸದಸ್ಯತ್ವ ಹೊಂದಿರುವ ರೈತರಿಗೆ ಹೊಸ ಸಾಲ ಮಂಜೂರು ಮಾಡಿ ಹಣ ವಿತರಿಸಬೇಕು, ಹೊಸ ಸಾಲಕ್ಕಾಗಿ ಅಮಾಯಕ ರೈತರನ್ನು ಅಲೆದಾಡಿಸಬಾರದು ಸಾಲ ಮನ್ನಾ ಆದ ಎಲ್ಲಾ ರೈತರಿಗೆ ಪ್ರತಿ ಎಕರೆಗೆ 25000 /- ರೂಪಾಯಿ ಸಾಲ ವಿತರಿಸಬೇಕು ಜೇವರ್ಗಿ ತಾಲೂಕಿನಲ್ಲಿ 40 ಸಹಕಾರ ಸಂಘಗಳಿದ್ದು 22 ಮಾರ್ಚ್ 2022ಕ್ಕೆ ಡಿ ಪಾಸಾಗಿದೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಮನ್ನಾ ಮಾಡಿರೋ ಹಣ ಬ್ಯಾಂಕಿನವರು ಜಮಾ ತೆಗೆದುಕೊಂಡಿರುತ್ತಾರೆ ಇಲ್ಲಿವರೆಗೆ ಸಾಲ ವಿತರಣೆ ಮಾಡುವುದಿಲ್ಲ ಹೊಸ ಸಾಲ ಮತ್ತು ಮನ್ನಾ ಮಾಡಿರೋ ಸಾಲವನ್ನು ಕೊಡುವಂತೆ ಹೋರಾಟ ಹಮ್ಮಿಕೊಳ್ಳಲಾಗಿತ್ತು ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಸಂಘ ಕಲ್ಬುರ್ಗಿಯ ಎಂ ಡಿ ಶರಣಬಸಪ್ಪ ಬೆಣ್ಣೂರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ದಿ,5/7/2022 ಒಳಗಾಗಿ ಹೊಸ ಸಾಲ ಕೊಡಲಾಗುವುದು ಹಾಗೂ ಮನ್ನಾ ಆದ ಸಾಲವನ್ನು ಒಂದು ತಿಂಗಳ ಒಳಗಾಗಿ ಎಲ್ಲಾ ರೈತರಿಗೆ ಕೊಡಲಾಗುವುದು ಎಂಬ ಭರವಸೆ ಕೊಟ್ಟ ಮೇಲೆ ಹೋರಾಟವನ್ನು ಹಿಂದಕ್ಕೆ ಪಡೆಯಲಾಯಿತು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶರಣು ಸಲಗರ್, ವೆಂಕೋಬರಾವ್ ವಾಗಿನಗೇರಿ ಮಾದೇವಪ್ಪ ಇಜೇರಿ ನೀಲ್ಕೋಡ್, ಸುಭಾಸ್ ಹೊಸ್ಮನಿ, ಶಹಬುದ್ದಿನ್ ಪಟೇಲ್ ಗೊಬ್ಬರವಾಡಿಗಿ ಸೇರಿದಂತೆ ಅನೇಕ ನೂರಾರು ರೈತರು ಉಪಸ್ಥಿತರಿದ್ದರು..

ವರದಿ.ಬಸವರಾಜಯ್ಯ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend