ಭೀಮಸಮುದ್ರ:- ರೈತನ ಮೇಲೆ ಕರಡಿ ದಾಳಿ ಗಂಭೀರ ಗಾಯ…!!!

Listen to this article

ಭೀಮಸಮುದ್ರ:- ರೈತನ ಮೇಲೆ ಕರಡಿ ದಾಳಿ ಗಂಭೀರ ಗಾಯ

ಗುಡೇಕೋಟೆ:- ಹೋಬಳಿ ವ್ಯಾಪ್ತಿಯಲ್ಲಿ ಬರುವ ಭೀಮಸಮುದ್ರ ಗ್ರಾಮದಲ್ಲಿ ಜಮೀನಿಗೆ ಹೋಗುವ ವೇಳೆ ದಾರಿಯ ಮಧ್ಯೆ ರೈತನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ಭೀಮಸಮುದ್ರ ಗ್ರಾಮದ ಪೂಜಾರ ಪ್ರಸನ್ನ ಕುಮಾರ್ ತಂದೆ ಕರಿಯಪ್ಪ (41 ವರ್ಷ) ಗಾಯಗೊಂಡವರು
ಶುಕ್ರವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿರುವ ಜಮೀನಿಗೆ ನೀರು ಹಾಯಿಸಲು ಹೋಗುವ ವೇಳೆ ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತಿದ್ದ ಕರಡಿ ರೈತನ ಮೇಲೆ ಏಕಾಏಕಿ ದಾಳಿ ನಡೆಸಿ ಬಲಗೈಗೆ ಕಚ್ಚಿ ಗಾಯಗೊಳಿಸಿದೆ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ರೈತ ಚಿರಡಿದ್ದಾನೆ ಇದನ್ನು ಗಮನಿಸಿದ ಅಕ್ಕಪಕ್ಕದ ರೈತರು ಸ್ಥಳಕ್ಕೆ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ ಕರಡಿ ದಾಳಿಯಿಂದ ಗಾಯಗೊಂಡ ರೈತನನ್ನು ರೈತರು, ಹಾಗೂ ಗ್ರಾಮಸ್ಥರು ಚಿಕ್ಕಜೋಗಿಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ ರೈತನಿಗೆ ಗಾಯಗೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಕೂಡ್ಲಿಗಿಯ ಸಾರ್ವಜನಿಕ ಆಸ್ಪತ್ರೆಗೆ ಕಳಿಸಲಾಗಿದೆ.
ಗ್ರಾಮಸ್ಥರಲ್ಲಿ ಆತಂಕ ರೈತನ ಮೇಲೆ ನಡೆಸಿರುವ ಈ ಕರಡಿ ದಾಳಿಯಿಂದ ನಮಗೆ ಆತಂಕ ಶುರುವಾಗಿದೆ ಭೀಮಸಮುದ್ರ ಗ್ರಾಮವು ವೀಳ್ಯದೆಲೆ ತೋಟ ಹಾಗೂ ನೀರಾವರಿಗಳಿಂದ ಕೂಡಿದ್ದು ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ ಅರಣ್ಯ ಸಮೀಪದಲ್ಲಿಯೇ ರೈತರ ಜಾಮೀನುಗಳು ಹೆಚ್ಚಿದ್ದು ಜಮೀನಿನ ಕೆಲಸಗಳಿಗೆ ಹೋಗಿ ಬರಲು ಕಷ್ಟ ಅನ್ನುತ್ತಾರೆ ರೈತರು ಅದಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವನ್ನು ವಹಿಸಬೇಕು ಅನ್ನುತ್ತಾರೆ ರೈತರು…

ವರದಿ. ಶಿವಕುಮಾರ್  ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend