ಗುಡೆಕೋಟೆ ಠಾಣೆ:-ಮೂವರು ಅಂತರಾಜ್ಯ ಕಳ್ಳರ ಬಂಧನ
ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ಕೊಂಬಿಹಳ್ಳಿಯ ದೇವಸ್ಥಾನದಲ್ಲಿ ನಂದಿ ವಿಗ್ರಹ ಕದ್ದು ಧ್ವಂಸ ಮಾಡಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಆಂಧ್ರಪ್ರದೇಶದ ಧರ್ಮಾವರಂ ಪಟ್ಟಣದ ರಾಮಾಂಜನೇಯ, ಮಾಲಿನ್ ಭಾಷಾ ಹಾಗೂ ನಿಮ್ಮ ಲಕುಂಠ ಪ್ರವೀಣ್ ಕುಮಾರ್ ಬಂಧಿತರು, ಮೊಳಕಾಲ್ಮೂರು ತಾಲೂಕಿನ ಹಾನಗಲ್ ಕ್ರಾಸ್ ನಲ್ಲಿ ಅನುಮಾನ ಹಿನ್ನೆಲೆ ವಿಚಾರಿಸಿದಾಗ ನಂದಿ ವಿಗ್ರಹ ಕಳ್ಳತನ ನಡೆದಿರೋದು ಗೊತ್ತಾಗಿದೆ ಕೊಂಬಿಹಳ್ಳಿ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ನಂದಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ನೆಪದಲ್ಲಿ ಆರೋಪಿಗಳು ಆಗಮಿಸಿದ್ದರು ಜು: 14ರಂದು ರಾತ್ರಿ ವೇಳೆ ದೇವಸ್ಥಾನದ ಬಾಗಿಲ ಬೀಗ ಮುರಿದು ನಂದಿ ವಿಗ್ರಹವನ್ನು ಕಳ್ಳತನ ಮಾಡಿದ್ದರು,ಬೆಲೆ ಬಾಳುವ ಚಿನ್ನಾಭರಣ ಇರಬಹುದು ಎಂಬ ನಂಬಿಕೆಯಲ್ಲಿ ವಿಗ್ರಹದ ಧ್ವಂಸಗೊಳಿಸಿದ್ದರು ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ಗುಡೆಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಜೆ ಸುಬ್ರಹ್ಮಣ್ಯಂ ನೇತೃತ್ವದಲ್ಲಿ ಎಸ್ ಐ.ಗಳಾದ ನಾಗೇಂದ್ರಚಾರಿ,ಫಕ್ರುದ್ದೀನ್ ಪೊಲೀಸ್ ಕಾನ್ಸ್ಟೇಬಲ್ಗಳಾದ ಉಜ್ಜಪ್ಪ ,ಮಹಾಂತೇಶ್, ಗುರುಸ್ವಾಮಿ ,ನಾಗೇಶ್, ಕೀರ್ತಿರಾಜ್, ಬಸವರಾಜ್, ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸುವ ಕಾರ್ಯದಲ್ಲಿ ಸಹಕರಿಸಿ ವಿಗ್ರಹದ ಮೇಲಿದ್ದ ಬೆಳ್ಳಿ ಆಭರಣ ಮಾರಾಟ ಮಾಡಿ ಪಡೆದಿದ್ದ 6,000ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು ಜಿಲ್ಲಾ ಪೊಲೀಸ್ ಕಚೇರಿಯ ಸಿಡಿ ಆರ್ ಘಟಕದ ಸಿಬ್ಬಂದಿ ಕುಮಾರ್ ನಾಯಕ್ ಇವರ ಕಾರ್ಯಕ್ಕೆ ವಿಜಯನಗರ ಜಿಲ್ಲೆ ಮಾನ್ಯ ಗೌರವಾನ್ವಿತ ಪೋಲಿಸ್ ಅಧಿಕ್ಷಕರು ಪ್ರಶಂಸೆ ಯನ್ನು ವ್ಯಕ್ತಪಡಿಸಿದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030