ಭಾ.ಜ.ಪಾ ರಾಜ್ಯ ಎಸ್.ಟಿ ಮೋರ್ಚಾದ ಕೋಶ್ಯಾಧ್ಯಕ್ಷರಾಗಿ: ಬಂಗಾರು ಹನುಮಂತು
ಕೂಡ್ಲಿಗಿ: ಭಾರತೀಯ ಜನತಾ ಪಾರ್ಟಿಯ ರಾಜ್ಯ ಎಸ್.ಟಿ ಮೋರ್ಚಾದ ಸಂಘಟನಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲು ರಾಜ್ಯ ಎಸ್.ಟಿ ಮೋರ್ಚಾದ ವಿವಿಧ ಜವಬ್ದಾರಿಗಳಿಗೆ ನೂನತನಾವಾಗಿ ನೇಮಿಸಿ ಆದೇಶಿಸಲಾಗಿದೆ. ನೂತನ ಜವಬ್ದಾರಿಗಳಿಗೆ ನೇಮಕಗೊಂಡಿರುವ ಪ್ರಮುಖರಾಗಿ ಆತ್ಮೀಯ ಅಭಿನಂದನೆಗಳೊಂದಿಗೆ ಒದಗಿರುವ ಸ್ಥಾನಗಳಲ್ಲಿ ಸೂಕ್ತ ದಕ್ಷ ಹಾಗೂ ಅಪೇಕ್ಷಿತ ಕಾರ್ಯ ನಿರ್ವಹಣೆಗೆ ಸೂಚಿಸಲಾಗಿದೆ ಎಂದು ತಿಪ್ಪರಾಜು ಹವಲ್ದಾರ ರಾಜ್ಯ ಅಧ್ಯಕ್ಷರು ಎಸ್.ಟಿ. ಮೋರ್ಚಾ ಭಾರತೀಯ ಜನತಾ ಪಾರ್ಟಿ ಕರ್ನಾಟಕ ಇವರ ನೇತೃತ್ವದಲ್ಲಿ ನೂತನ ಪದಾಧಿಕಾರಿಯಾಗಿ ಬಂಗಾರು ಹನುಮಂತು ಕೂಡ್ಲಿಗಿ ಇವರಿಗೆ ಕರ್ನಾಟಕ ಭಾರತೀಯ ಜನತಾ ಪಾರ್ಟಿ ರಾಜ್ಯ ಎಸ್.ಟಿ ಮೋರ್ಚ ರಾಜ್ಯ ಘಟಕದ ಕೋಶ್ಯಾಧ್ಯಕ್ಷರನ್ನಾಗಿ ನೇಮಿಸಿ ಪತ್ರ ನೀಡಿ ಅಭಿನಂದಿಸಿದ್ದಾರೆ. ಇದೇ ವೇಳೆ ಬಂಗಾರು ಹನುಮಂತು ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಸಂಘಟನೆ ಮಾಡುವುದನ್ನು ಗುರುತಿಸಿ ಭಾರತೀಯ ಜನತಾ ಪಾರ್ಟಿ ರಾಜ್ಯ ಎಸ್.ಟಿ ಮೋರ್ಚ ರಾಜ್ಯ ಘಟಕದ ಕೋಶ್ಯಾಧ್ಯಕ್ಷರನ್ನಾಗಿ ನನ್ನನ್ನು ನೇಮಿಸಿ ಜವಾಬ್ದಾರಿ ನೀಡಿದ್ದಕ್ಕೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಜೀ ಹಾಗೂ ಎಸ್.ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ತಿಪ್ಪರಾಜ್ ಹವಾಲ್ದಾರ್ ಅವರಿಗೆ ಹಾಗೂ ಜಿಲ್ಲಾಧ್ಯಕ್ಷರಾದ ಶ್ರೀ ಚನ್ನಬಸನಗೌಡರು ಅವರಿಗೆ ಹಾಗೂ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ…
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030