ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಈ ದಿನ ಸ್ವ ಗೃಹದಲ್ಲಿ ತಮ್ಮ ಆಪ್ತ ಬಳಗದ ಸದಸ್ಯರಾದ ಡಾ. ಸಿದ್ದೇಶ ಕಾತ್ರಿಕೆಹಟ್ಟಿ ಅವರು ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಜಾನಪದೀಯ ಮತ್ತು ಆಧುನಿಕ ಮಹಿಳಾ ಪ್ರಜ್ಞೆಯ ಸಂಘರ್ಷ ಎಂಬ ಸಂಶೋಧನೆ ಫೆಲೋಶಿಪ್ ಕೃತಿಯನ್ನು ಬಿಡುಗಡೆ ಮಾಡಿದರು. ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹತ್ವದ ಸಂಶೋಧನೆಯ ಕೃತಿಗಳನ್ನು ರಚಿಸುವ ಮೂಲಕ ಸಾಧನೆ ಹಾದಿಯಲ್ಲಿ ಮುನ್ನಡೆಯಿರಿ ಎಂದೂ ಶುಭಾ ಹಾರೈಸಿದರು. ಹಾಗೆಯೇ ನಿನ್ನ ಜೊತೆಗೆ ನಾನು ಇದ್ದೇನೆ ಎಂದೂ ಹೇಳಿ ಬಲ ತುಂಬಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಶ್ರೀಮತಿ ಎನ್. ಟಿ. ಗಂಗಮ್ಮ ಅವರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030