ವಿಶ್ವ ಕನ್ನಡ ಕಲಾ ಸಂಸ್ಥೆ (ನೋಂ) ಹಿರಿಯೂರು
ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು
ಇವರು ಆಯೋಜಿಸಿರುವ ಕವಿ ಸಮ್ಮೇಳನ – ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ-2024
ಈ ಮೇಲ್ಕಂಡ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಈ.ರವೀಶ (ಅಕ್ಕರ) ಇವರು ಎಂದಿನಂತೆ ಕವಿಗಳಿಗೆ ಪ್ರೋತ್ಸಾಹ ನೀಡಲು ಇದೇ ಅಕ್ಟೋಬರ್ / ನವೆಂಬರ್ ತಿಂಗಳಲ್ಲಿ ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ-2024 ನ್ನು ನಡೆಸುವ ಮೂಲಕ ಕವಿ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್/ ನವಂಬರ್ ರಂದು ಬೆಳಗ್ಗೆ 9:30 ಗಂಟೆಗೆ ಕವನ ವಾಚನ ಸಮ್ಮೇಳನ ಪ್ರಾರಂಭವಾಗಲಿದೆ.
1) ತಲಾ ಐವತ್ತು ಕವಿ/ಕವಯತ್ರಿಯರಂತೆ ಇಪ್ಪತ್ತು ಗುಂಪುಗಳನ್ನು ರಚಿಸಲಾಗುತ್ತದೆ.
2) ಕವನ ವಾಚನ ಸಮ್ಮೇಳನದ ಪ್ರವೇಶ ಶುಲ್ಕ ರೂ. 100 /-
3) ಪ್ರತಿಯೊಬ್ಬರಿಗೂ ಸ್ವಂತ ರಚನೆಯಾದ ಒಂದು ಕವಿತೆಯನ್ನು ವಾಚಿಸಲು ಅವಕಾಶವಿರುತ್ತದೆ.
4) ನಿಮ್ಮ ಕವನ 20 ಸಾಲುಗಳನ್ನು ಮೀರಬಾರದು.
5) ಕವನ ಯಾವುದೇ ವರ್ಗ, ವರ್ಣ, ಧರ್ಮ, ಭಾಷೆ ಮುಂತಾದವುಗಳನ್ನು ದೂಷಿಸುವಂತಿರಬಾರದು.
6) ಆಸಕ್ತ ಕವಿಗಳು/ಕವಯತ್ರಿಯರು ಈ ಕೆಳಕಂಡ ಸಂಖ್ಯೆ 9611419145 ,9945606662, 8867435662 ,8971002744 ವಾಟ್ಸಾಪ್ ನಲ್ಲಿ ನಿಮ್ಮ ಹೆಸರು, ಪ್ರವೇಶ ಶುಲ್ಕ, ದೂರವಾಣಿ ಸಂಖ್ಯೆ ನಮೂದಿಸಿ ಹೆಸರನ್ನು ದಾಖಲಿಸುವುದು.
7) ನೀವು ನಿಮ್ಮ ಬೇರೆ ಬೇರೆ ವಾಟ್ಸಾಪ್ ಗುಂಪುಗಳಲ್ಲಿ ಈ ಸ್ಪರ್ಧೆಯ ವಿಚಾರವನ್ನು ಪ್ರಚಾರ ಮಾಡಿ. ನಿಮ್ಮೊಡನೆ ಅವರೂ ಭಾಗವಹಿಸುವಂತಾಗಲಿ.
8) ಹೆಸರು ನೋಂದಾಯಿಸಲು ಕೊನೆಯ ದಿನಾಂಕ 25/9/2024
9) ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು.
10) 12ನೇ ಶತಮಾನದ ಶರಣ ಶರಣೆಯರ ಕವನ ಅಥವಾ ವಚನ ಗಾಯನ
*ವಿಶೇಷ ಸೂಚನೆ*
1.ಒಂದು ಸಾವಿರ ಕವಿಗಳ ಕವಿಗೋಷ್ಠಿ ವಾಚನ ಸಮ್ಮೇಳನವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ನೋಂದಾಯಿಸಲು ಪ್ರಯತ್ನ ಮಾಡುತ್ತಿದ್ದೇವೆ.ಅದುದರಿಂದ ಹೆಸರು ನೋಂದಾಯಿಸಿಕೊಳ್ಳುವವರು ನಿಮ್ಮ ಆಧಾರ್ ಜೆರಾಕ್ಸ್ ನಿಮ್ಮ ಭಾವಚಿತ್ರವನ್ನು ಕಾರ್ಯಕ್ರಮಕ್ಕೆ ಬರುವಾಗ ತಪ್ಪದೆ ತರಬೇಕೆಂದು ತಮ್ಮಲ್ಲಿ ಮನವಿ
2).ಪ್ರವೇಶ ಶುಲ್ಕವನ್ನು ಈ ನಂಬರಿಗೆ 9611419145 ಗೂಗಲ್ ಪೇ / ಫೋನ್ ಪೇ ಮಾಡಿ ಸ್ಕ್ರೀನ್ ಶಾಟ್ ತೆಗೆದು ಹಾಕಬೇಕು.
3)ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ನೋಂದಾಯಿಸಲು ಪ್ರಯತ್ನ ಮಾಡುತ್ತಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕವಿ ಮಿತ್ರರಲ್ಲಿ ಮನವಿ ಮಾಡುತ್ತಿದ್ದೇನೆ.ಶ್ರೀ. ಈ. ರವೀಶ (ಅಕ್ಕರ)ಸಂಸ್ಥಾಪಕ ಅಧ್ಯಕ್ಷರು ವಿಶ್ವ ಕನ್ನಡ ಕಲಾ ಸಂಸ್ಥೆ ನೋ ಬೆಂಗಳೂರು
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030