ವಿದ್ಯುತ್ ಶಾಕ್ ಹೊಡೆದು ಸೋಮಶೇಖರ್ ನಿಧನ ; ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…
ಕೂಡ್ಲಿಗಿ ಪಟ್ಟಣದ ರಾಮನಗರ ನಿವಾಸಿಯಾದ ಸೋಮಶೇಖರ್ ( 29) ಅವರಿಗೆ ವಿದ್ಯುತ್ ಶಾಕ್ ಹೊಡೆದು ಇತ್ತೀಚಿಗೆ ನಿಧನರಾಗಿದ್ದರು*. ಅವರು ತೀರಿಕೊಂಡ ದಿನ *ಶಾಸಕರು ತಾಲೂಕು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಮೃತ ದೇಹ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ವೈದ್ಯರಿಗೆ ಸೂಚಿಸಿದರು*. ದುಃಖದಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮೊಂದಿಗೆ ಇದ್ದೇನೆ ಎಂದೂ ಹೇಳಿದ್ದರು. *ತಮ್ಮ ಕುಟುಂಬವನ್ನು ಮತ್ತೇ ಭೇಟಿ ಮಾಡುತ್ತೇನೆ ಎಂದೂ ಹೇಳಿದಂತೆ ದಿ; 05-09-24 ರಂದು *ಸ್ಥಳೀಯ ಮುಖಂಡರೊಂದಿಗೆ ಸೋಮಶೇಖರ್ ಅವರ ಕುಟುಂಬವನ್ನು ಶಾಸಕರು ಭೇಟಿ ಮಾಡಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬುವ ಕೆಲಸ ಮಾಡಿದರು*. ಹಾಗೆಯೇ *ಕೊಟ್ಟ ಮಾತು ಉಳಿಸಿಕೊಂಡು, ಕಷ್ಟ – ನೋವಿನಲ್ಲಿರುವ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು*. ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ ಹಾಗೂ ಉಪಾಧ್ಯಕ್ಷರಾದ ಲೀಲಾವತಿ ಪ್ರಭಾಕರ, ಸದಸ್ಯರು, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ಧನ ಗೌಡ, ಮುಖಂಡರಾದ ನರಸಿಂಹಗಿರಿ ಎಸ್ ವೆಂಕಟೇಶ,
ಉದಯ ಜನ್ನು, ಕಂಪ್ಯೂಟರ್ ರಾಘವೇಂದ್ರ, ಬಿ.ಕೆ. ಸರಸ್ವತಿ ರಾಘವೇಂದ್ರ. ಪ. ಪಂ. ಸದಸ್ಯರು, ಪಿ.ಚಂದ್ರಪ್ಪ, ಕಟ್ಟೆ ಬಸವರಾಜ, ಡೊಕ್ಕೇರ ಸುರೇಶ, ಮಾಳಮುತ್ತಿ ಅರ್ಜುನ, ಸಿ.ಬಿ.ಸಿದ್ದೇಶ, ಬಡಭೀಮಯ್ಯನವರ ವೆಂಕಟೇಶ, ಬಂಗೇರ ಮಾರಪ್ಪ, ಗುರಿಕಾರ ರಾಘವೇಂದ್ರ, ಅಡವಿ ಅವ್ವನವರ ರಾಘವೇಂದ್ರ, ಗದ್ದಲಾರ ದುರಗಪ್ಪ, ಪೋಟಲು ಭರಮಣ್ಣ, ಪೆದ್ದಯ್ಯನವರ ಕೊತ್ತಲೇಶ, ಗುಪ್ಪಾಲು ಬಸವರಾಜ, ಡೊಕ್ಕೇರ ಪ್ರಕಾಶ, ಗದ್ದಲಾರ ಪಕೀರ, ಪಿ. ಉಮೇಶ, ಮ್ಯಾಕಲರ ಭೀಮಪ್ಪ, ಡ್ರೈವರ್ ಸುಲೇಮಾನ್, ಬಳೆಗೇರ ಮಸ್ತಾನ ಸಾಬ್, ಬಡ ಭೀಮಯ್ಯನವರ ರಾಮಣ್ಣ, ಮಾರ್ಗದಯ್ಯನವರ ರಾಮಾಂಜನೇಯ , ಬಂಗೇರ ಸತೀಶ, ಸೋಮಯ್ಯನವರ ಸೊಲ್ಲೇಶ, ಡೊಂಕಯ್ಯನವರ ಮಹೇಶ, ರಜಾಕ್ ಸಾಬ್, ಬಂಡ್ರಿ ಸೋಮುಶೇಖರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030