ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ಮುಖ್ಯವಾಗಬೇಕು. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಕ್ಷೇತ್ರದ ಖಾನಹೊಸಹಳ್ಳಿ ಗ್ರಾಮದ ಗಾಣಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ದಿ; 04-09-24 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136 ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಉದ್ಘಾಟಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಾನೊಬ್ಬ ರೈತನ ಮಗನಾಗಿದ್ದೂ, ಕನ್ನಡ ಶಾಲೆಯಿಂದ ದೆಹಲಿಯ ವೈದ್ಯಕೀಯ ಶಿಕ್ಷಣವರೆಗೂ ಬೆಳೆದಿರುವೆ. ಸಮಾಜದಲ್ಲಿ ಪಡೆದುಕೊಂಡಿರುವಂತದ್ದನ್ನೂ, ಮತ್ತೇ ಮರಳಿ ಸಮಾಜಕ್ಕೆ ಕೊಡಲು ಬಂದಿರುವೆ ನೀವುಗಳು ಶಿಕ್ಷಕರಾಗಿರುವುದರಿಂದ ನಿಮಗೆ ನಾನು ಏನೂ ಹೇಳಲಿ. ನೀವು ಸಮಾಜಕ್ಕೆ ಒಳ್ಳೆಯದನ್ನು ಕೊಡಿ ಅಂತಹ ಅಷ್ಟೇ ಹೇಳುವೆ. ನಿಮ್ಮಲ್ಲಿ ಒಳ್ಳೆಯದು ಮತ್ತು ನೋವುಗಳಿವೆ.
ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿರುವೆ ಎಂದರು. ಈ ವೇಳೆ ಪ್ರತಿಭಾವಂತ ಶಿಕ್ಷಕರನ್ನು ಸನ್ಮಾಸಿ, ಬೇಡಿಕೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಬಿ.ಇಓ ಅಧಿಕಾರಿಗಳಾದ ಪದ್ಮನಾಭ ಕರಣಂ , ಖಾನಹೊಸಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಚೇತನ್ ಮತ್ತು ಉಪಾಧ್ಯಕ್ಷರು, ಸದಸ್ಯರು , ಮುಖಂಡರು, ಶಿಕ್ಷಕರು ಉಪಸ್ಥಿತರಿದ್ದರು. ..
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030