ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗೆದ್ದಲಗಟ್ಟೆ ಗ್ರಾಮದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಮುಖಂಡರಾದ ಹನುಮೇಶ ರವರ ತಾಯಿ ಹಾಗೂ ದಲಿತ ಹೋರಾಟಗಾರರಾದ ಶ್ರೀಮತಿ ಕಜ್ಜೇರ ಮಲ್ಲಮ್ಮ ಅವರು ನಿನ್ನೇ ರಾತ್ರಿ ನಿಧನರಾದರು. ವಿಷಯ ತಿಳಿದ ನಂತರ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರ ಸೂಚನೆಯಂತೆ ತಮ್ಮ ಆಪ್ತ ವಲಯದ ಸದಸ್ಯರಾದ ಮಾರಪ್ಪ ನರಸಿಂಹಗಿರಿ ಅವರು ಅವರ ವಿಧಿ ವಿಧಾನಗಳಿಗೆ ಆರ್ಥಿಕ ನೆರವು ನೀಡಿದರು. ಹಿರಿಯರ ದರ್ಶನ ಪಡೆದು ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಾಮಸ್ವಾಮಿ, ಹಾಲು ಉತ್ಪಾದಕರ ಸಂಘದ ಸದಸ್ಯರಾದ ರಮೇಶ, ಬಿಲ್ ಕಲೆಕ್ಟರ್ ಜಾತಪ್ಪ, ಮುಖಂಡರಾದ ಪೆದ್ದಮಲ್ಲಯ್ಯ, ಚಂದ್ರಪ್ಪ , ದಲಿತ ಮುಖಂಡರಾದ ಹೇಮಣ್ಣನವರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030