ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ತಮ್ಮ ತಾಯಿ ಜೊತೆ ಹುಟ್ಟು ಊರು ನರಸಿಂಹಗಿರಿಯಲ್ಲಿ ಇಂದಿಗೂ ವಾಸ ಮಾಡುತ್ತಾ ಪ್ರತಿ ನಿತ್ಯ ಹಳ್ಳಿಗಳನ್ನು ಸುತ್ತಿ ನೂರಾರು ಕಷ್ಟಗಳನ್ನು ಆಲಿಸಿ ಪರಿಹರಿಸಿ ಜನಸಾಮಾನ್ಯರಲ್ಲಿ ಆತ್ಮ ವಿಶ್ವಾಸ ತಂದುಕೊಟ್ಟು ಕ್ಷೇತ್ರದ ಪ್ರತಿಯೊಬ್ಬರ ಮನಗೆದ್ದಿದ್ದಾರೆ. ಮಾನ್ಯ ಶಾಸಕರು ಮಾತನಾಡುತ್ತಾ, “ನನಗೆ ಯಾವುದೇ ಪಕ್ಷ, ಜಾತಿ ಮತ್ತು ಧರ್ಮ ಮುಖ್ಯ ಅಲ್ಲಾ. ನಾನು ಕೂಡ್ಲಿಗಿ ಕ್ಷೇತ್ರದ ಸಮಸ್ತ ಜನರ ಸೇವಕ” – ಎಂಬ ಮಾತನ್ನು ಜನರ ಮುಂದೆ ಒತ್ತಿ ಹೇಳುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ನಾವು ರಾಜಕಾರಣ ಮಾಡದೇ ಕ್ಷೇತ್ರದ ಬಡವರು ಮತ್ತು ಕಡುಬಡವರ ತೊಂದರೆಗಳು ಹಾಗೂ ಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗುರಿಯನ್ನು ಇಟ್ಟುಕೊಂಡು ಪ್ರತಿ ಸಮುದಾಯ, ಪ್ರತಿ ಕುಟುಂಬಕ್ಕೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಾ ಅಭಿವೃದ್ಧಿ ಪಥದ ದಿಕ್ಕಿನ ಕಡೆ ಸಾಗೋಣ ಎನ್ನುತ್ತಾರೆ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030