ಮರದ ಮೇಲಿನಿಂದ ಬಿದ್ದು ರೈತ ಸಾವು ಕುಟುಂಬಸ್ಥರಿಗೆ ಪರಿಹಾರ ವಿತರಣೆ: ಡಾ ಶ್ರೀನಿವಾಸ್ ಎನ್ ಟಿ ರವರು
ದಿ:20.07.2024 ರಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ತಾಲೂಕಿನ ನಾಗರಹುಣಿಸೆ ಗ್ರಾಮದ ಗೊಲ್ಲರ ಹುಲುಕುಂಟೆಪ್ಪ ಕಳೆದ ಕೆಲವು ತಿಂಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ ಮರದ ಮೇಲಿನಿಂದ ಬಿದ್ದು ಮೃತಪಟ್ಟಿದ್ದು ಕುಟುಂಬವು ದುಃಖ ತಪ್ತದಿಂದ ಕಡು ಬಡತನ, ವ್ಯವಸಾಯ ಮತ್ತು ಕೂಲಿಯನ್ನು ನಂಬಿ ಜೀವನ ನಡೆಸುತ್ತಿರುವ ಸದರಿ ಮೃತ ಕುಟುಂಬಕ್ಕೆ ಮಾನವೀಯ ಹಿತದೃಷ್ಟಿಯಿಂದ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರ ಒತ್ತಾಯದ ಕೋರಿಕೆಯಂತೆ ಸದರಿ ಘಟನೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಷಾದ ವ್ಯಕ್ತಪಡಿಸಿ 2ಲಕ್ಷಗಳು ಆರ್ಥಿಕ ಸಹಾಯಧನ ಮಂಜೂರು ಮಾಡಿದ್ದಾರೆ. ಆದ್ದರಿಂದ ಮಾನ್ಯ ಶಾಸಕರು ಮೃತನ ಕುಟುಂಬದವರನ್ನು ಭೇಟಿ ಮಾಡಿ ಸರ್ಕಾರದಿಂದ ನೀಡಿದ ಎರಡು ಲಕ್ಷ (2,00000)ಚೆಕ್ಅನ್ನು ಮೃತ ಪತ್ನಿ ಗೊಲ್ಲರ ಪಾರ್ವತಮ್ಮ ನಾಗರ ಹುಣಿಸೆ ಅವರಿಗೆ ವಿತರಿಸಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030