ಕೂಡ್ಲಿಗಿ ವ್ಯಾಪಾರ, ವಾಣಿಜ್ಯ ಮತ್ತು ಶೈಕ್ಷಣಿಕ ಪಟ್ಟಣವಾಗಿ ಹೊರಹೊಮ್ಮಲಿ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಚಿತ್ರದುರ್ಗ ನಗರದ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಶ್ರೀ ವೀರೇಂದ್ರ ಪಪ್ಪಿ ಅವರು ಕೂಡ್ಲಿಗಿ ಪಟ್ಟಣದ ಬಾಪೂಜಿ ನಗರದಲ್ಲಿ ನಿರ್ಮಿಸಿರುವ ( ಪಪ್ಪಿಸ್ ಎನ್ ಪ್ಲೇವ್ ) ಲೇ ಔಟ್ ಅನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ. 02-07-24 ರಂದು ಉದ್ಘಾಟಿಸಿ ಮಾತನಾಡಿದರು. ಸನ್ಮಾನ್ಯರಾದ ಶ್ರೀ ವೀರೇಂದ್ರ ಪಪ್ಪಿ ಅವರು ನಿರ್ಮಿಸಿದ ಲೇ ಔಟ್ ಸುಸಜ್ಜಿತ, ಯೋಜನಾಬದ್ಧ ಮತ್ತು ಶಿಸ್ತು ಬದ್ಧವಾಗಿದೆ. ನಮ್ಮ ಕೂಡ್ಲಿಗಿ ಪಟ್ಟಣ ನಾಗರಿಕತೆಯ ತೊಟ್ಟಿಲು ಎನಿಸಿಕೊಂಡು ಸರ್ವಜನಾಂಗದ ಶಾಂತಿಯ ತೋಟವಾಗಿ ಬೆಳೆಯಲಿ ಎಂದೂ ಹೇಳಿದರು. ಹಾಗೆಯೇ ಮುಂದಿನ ದಿನಗಳಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಅದರ ಜೊತೆಗೆ ಶೈಕ್ಷಣಿಕ ಪಟ್ಟಣವಾಗಿ ಹೊರಹೊಮ್ಮಲಿ ಎಂಬುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ವೀರೇಂದ್ರ ಪಪ್ಪಿ ಅವರ ಬಂದುಗಳು, ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು….
ವರದಿ. ಎಂ,ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030