ವಾಲ್ಮೀಕಿ ಅಭಿವೃದ್ಧಿ ನಿಗಮ ಕರ್ಮಕಾಂಡ ಮತ್ತೊಂದು ಬಹುದೊಡ್ಡ ಹಗರಣ
28/06/20026 ರಂದು ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗಳ ಮುತ್ತಿಗೆ ಹಾಗೂ ಪ್ರತಿಭಟನೆ.
ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಪಂಗಡ ಇಲಾಖೆಯಲ್ಲಿ.ಸರ್ಕಾರಗಳು ಪರಿಶಿಷ್ಟರ ಅಭಿವೃದ್ಧಿಗೋಸ್ಕರ ಪ್ರತಿ ಬಜೆಟ್ ನಲ್ಲೂ ಇಲಾಖೆ ಹಾಗೂ ನಿಗಮಗಳಿಗೆ ಕೋಟಿಗಟ್ಟಲೆ ಹಣ ಕೊಟ್ಟರೆ ಆ ಹಣವನ್ನು ಬಡವರಿಗೆ ಮೀಸಲಿಡದೆ ಅಧಿಕಾರಿಗಳು ತಿಂದು ತೇಗುತ್ತಿದ್ದಾರೆ.
ಕೇಂದ್ರ ಸರಕಾರ ಪರಿಶಿಷ್ಟ ಪಂಗಡ ಇಲಾಖೆಗೆ ಕೊಟ್ಟ ಸುಮಾರು 83 ಕೋಟಿ ಬಡವರ ಹಣವನ್ನು ತಮ್ಮ ತಮ್ಮ ಜೆಬಿಗೆ ಇಳಿಸಿಕೊಂಡ ಅಧಿಕಾರಿಗಳು.ಇಂತಹ ಅಧಿಕಾರಿಗಳಿಗೆ ಜೈಲು ಶಿಕ್ಷೆ ಆಗಬೇಕೆ ಹೊರತು ಅಮಾನತ್ತು ಮಾಡಿದ್ದರಿಂದ ಯಾವುದೇ ಪ್ರಯೋಜನವಿಲ್ಲ.
187 ಕೋಟಿ ರೂಪಾಯಿಗಳ ಹಣವನ್ನು 700 ಖಾತೆಗಳಿಗೆ ವರ್ಗಾವಣೆ ಮಾಡಿ ಕೂಲಿಕಾರ್ಮಿಕರಿಗೆ ಹಾಗೂ ಧನ ಕಾಯುವ ಎಮ್ಮೆ ಕಾಯುವ ಸಾಮಾನ್ಯ ಬಡ ಜನತೆಗಳ ಅಕೌಂಟಿಗೆ ಹಾಕಿ ಲೂಟಿ ಮಾಡಿರುವ ಕಾಂಗ್ರೆಸ್ ಸರ್ಕಾರ ದ ಮುಖ್ಯಮಂತ್ರಿಗಳು ಈ ಕೂಡಲೇ ರಾಜೀನಾಮೆ ಕೊಡಲೇಬೇಕು ಎಂದು ಎಸ್ ಟಿ ಮೋರ್ಚಾ ರಾಜ್ಯದ್ಯಕ್ಷರಾದ ಶ್ರೀ ಬಂಗಾರು ಹನುಮಂತ ರವರು ಆಗ್ರಹಿಸುತ್ತಿದ್ದಾರೆ….
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030