ಕೂಡ್ಲಿಗಿ ತಾಲ್ಲೂಕು ಪಂಚಮಶಾಲಿ ಸಮಾಜ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ
ಶ್ರೀಯುತ ಹೆಚ್ ರೇವಣ್ಣ ಅಧ್ಯಕ್ಷರು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಕೂಡ್ಲಿಗಿ ತಾಲೂಕು ಘಟಕ ಇವರ ಅಧ್ಯಕ್ಷತೆಯಲ್ಲಿ, ಕೂಡ್ಲಿಗಿ ತಾಲೂಕು ಮಟ್ಟದ ಪಂಚಮಸಾಲಿ ಸಮಾಜದ 2023-24ನೇ ಸಾಲಿನ SSLC & PUC ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ತಾಲೂಕು ಸಮಾವೇಶ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು, ಪೂರ್ವಭಾವಿ ಸಭೆಯನ್ನು ದಿನಾಂಕ 2 ಜೂನ್ 2024 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಎಂಬಿ ಅಯ್ಯನ ಹಳ್ಳಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ತಾಲೂಕಿನ ಪಂಚಮಸಾಲಿ ಸಮಾಜದ ಯುವ ಘಟಕ, ಹರಸೇನಾ,ಮಹಿಳಾ ಘಟಕ, ಗ್ರಾಮ ಘಟಕ, ನೌಕರ ಘಟಕಗಳ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಮಾತೃ ಘಟಕದ ಸರ್ವ ಪದಾಧಿಕಾರಿಗಳು, ಸಮಾಜದ ಬಂಧುಗಳು, ಮುಖಂಡರು, ಈ ಪೂರ್ವಭಾವಿ ಸಭೆಗೆ ಆಗಮಿಸಿ, ಚರ್ಚಿಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ವಿನಂತಿ.
ಕಾರ್ಯದರ್ಶಿಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಕೂಡ್ಲಿಗಿ ತಾಲೂಕು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030