ನಮ್ಮ ಕೂಡ್ಲಿಗಿ ಕ್ಷೇತ್ರದ ಜನ ಶಿಕ್ಷಣ ಮತ್ತು ಉದ್ಯೋಗದಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ನಮ್ಮ ಕೂಡ್ಲಿಗಿ ಕ್ಷೇತ್ರದ ಜನ ಶಿಕ್ಷಣ ಮತ್ತು ಉದ್ಯೋಗದಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ಪಟ್ಟಣದ ಎನ್. ಟಿ. ಬಿ. ಕರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಗತಿ ನಡೆಸುತ್ತಿರುವುದನ್ನು ದಿ.18-05-24 ರಂದು ವಿದ್ಯಾರ್ಥಿಗಳ ಕುಂದುಕೊರತೆ ವಿಚಾರಿಸಿದರು ತರಗತಿಯಲ್ಲಿ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದನ್ನು ಕಂಡು ಸಂತಸಗೊಂಡು ಕಿವಿ ಮಾತು ಹೇಳುತ್ತಾ ಕೇರಳ ಜ‌ನ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಅಧಿಕಾರಿಗಳಾಗಿ ದೇಶದ ವಿವಿಧ ಮೂಲೆಗಳಲ್ಲಿ ಕೆಲಸ ಮಾಡಿ ಮಾದರಿಯಾಗಿದ್ದಾರೆ. ಇನ್ನೂ ಕೆಲವರು ದೇಶ ಮತ್ತು ವಿದೇಶಗಳಲ್ಲಿ ನಸ್೯ಗಳಾಗಿ ಸೇವೆ ಸಲ್ಲಿಸುತ್ತಿರುವುದು ಇದೆ.

ನೀವು ಬಡವರು ಅಂತಹ ನಾನು ಉಚಿತ ಸ್ಪರ್ಧಾತ್ಮಕ ತರಗತಿಗಳನ್ನು ಕಲ್ಪಿಸಿಕೊಟ್ಟಿಲ್ಲಾ. ಅಂತಹ ಸಂಕುಚಿತ ಭಾವನೆ ಒಳ್ಳೆಯದು ಅಲ್ಲಾ. ನಾನು ಅಧಿಕಾರಕ್ಕೆ ಬರುವ ಮುಂಚೆಯೇ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಇಂತಹ ಕಾರ್ಯಕ್ರಮ ಹುಟ್ಟುಹಾಕುವ ಚಿಂತನೆ ನಡೆಸಿದ್ದೆ. ನನ್ನ ಗುರಿ, ಪ್ರತಿಯೊಬ್ಬರೂ ಶಿಕ್ಷಣ -ಉದ್ಯೋಗ ಮೂಲಕ ಸ್ವಾಭಿಮಾನದಿಂದ ಬದುಕುವಂತೆ ನೋಡಿಕೊಳ್ಳುವುದಾಗಿದೆ. ಆ ಕಾರಣಕ್ಕಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ.‌ ನನ್ನ ತಂದೆಯವರು ಒಂದು ಮಾತು ಹೇಳಿದ್ದರು. ನೀನು ದಾರಿ ತಪ್ಪಿ ಹೋದರೆ ನನ್ನ ಮಗನೇ ಅಲ್ಲಾ ಅಂತಹ. ‌ಆ ಒಂದು ಮಾತು ಇಲ್ಲಿ ತನಕ ತಂದು ನಿಲ್ಲಿಸಿದೆ. ನಾನು ಆರ್ಥಿಕವಾಗಿ ಗಟ್ಟಿಯಾದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು.

ಯುವಕರು ಕುಟುಂಬ, ಸಂಸಾರದ ಜೀವನ ಕಡೆ ತಲೆ ಕೆಡಿಸಿಕೊಳ್ಳಬಾರದು. ಕೆಟ್ಟ ಚಟಗಳಿಗೆ ಬಲಿಯಾಗಿ ಅಡ್ಡ ದಾರಿ ಹಿಡಿಯಬಾರದು ಜೀವನದಲ್ಲಿ ಬಡವರಾಗಿ ಹುಟ್ಟುವುದು ತಪ್ಪು ಅಲ್ಲಾ. ಆದರೆ ಬಡವರಾಗಿ ಸಾಯದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿ ಇದೆ. ಸಾಧನೆ ಕಡೆ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಕಡೆ ಗಮನ ಕೊಡಬೇಕು. ಪ್ರತಿಭಾವಂತ ಶಿಕ್ಷಕರ ಪಡೆ ನಿಮ್ಮ ಪರ ಕೆಲಸ ಮಾಡಲು ನಿಮ್ಮೊಂದಿಗೆ ಇದೆ. ಇಂತಹ ಅವಕಾಶವನ್ನು ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಮ್ಮ ಭಾಗದ ಚಿಕ್ಕ ಮಕ್ಕಳಿಗೆ adolescence ( ಹದಿಹರಿಯ) ಶಿಕ್ಷಣ ಜಾರಿ ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ ಎಂದೂ ತಿಳಿಸಿದರು ಈ ಸಂದರ್ಭದಲ್ಲಿ ಎನ್.ಟಿ. ಬಿ ಕರಿಯರ್ ಅಕಾಡೆಮಿಯನ್ನು ಜವಬ್ದಾರಿ ತೆಗೆದುಕೊಂಡು ಮುನ್ನಡೆಸುತ್ತಿರುವ ಡಾ. ಉಮೇಶ್ ಅವರ ತಂಡ , ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend