ಭೀಮಸಮುದ್ರ : ಕರಡಿದಾಳಿ ಕಾಳು ಕಟ್ಟುವ ಹಂತದಲ್ಲಿದ್ದ ಮೆಕ್ಕೆಜೋಳ ಬೆಳೆ ನಾಶ…!!!

Listen to this article

ಭೀಮಸಮುದ್ರ : ಕರಡಿದಾಳಿ ಕಾಳು ಕಟ್ಟುವ ಹಂತದಲ್ಲಿದ್ದ ಮೆಕ್ಕೆಜೋಳ ಬೆಳೆ ನಾಶ…
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಭೀಮಸಮುದ್ರ ಗ್ರಾಮದ ಕುಂಟಪ್ಪರ ಜಾತಪ್ಪ ತಂದೆ ಲೇಟ್ ಭೀಮಪ್ಪ ಎಂಬ ರೈತನ ಸರ್ವೇ ನಂಬರ್ 105 ರಲ್ಲಿ ಸುಮಾರು 4 ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ಹೈಬ್ರಿಡ್ ಮೆಕ್ಕೆಜೋಳ ಬೆಳೆ ಮೂರ್ನಾಲ್ಕು ದಿನಗಳಿಂದ ಕರಡಿ ದಾಳಿಯಿಂದ ನಾಶವಾಗಿದೆ ಕಾಳು ಕಟ್ಟುವ ಹಂತದಲ್ಲಿದ್ದ ಹೈಬ್ರಿಡ್ ಮೆಕ್ಕೆಜೋಳ ಬೆಳೆ ಕರಡಿಗಳ ಗುಂಪು ಸೇರಿ ನಾಶ ಮಾಡಿದ್ದು ಇದರಿಂದ ಭೀಮಸಮುದ್ರ ಗ್ರಾಮದ ರೈತರಿಗೆ ತಲೆ ನೋವಾಗಿದೆ ಪರಿಣಮಿಸಿದೆ ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಮೆಕ್ಕೆಜೋಳದ ಬೆಳೆ ಉತ್ತಮವಾಗಿ ಬಂದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.

ಕಾಡು ಪ್ರಾಣಿಗಳು ರಾತ್ರಿ ವೇಳೆ ಜಮೀನುಗಳಿಗೆ ದಾಳಿ ಇಟ್ಟು ಬೆಳೆ ನಾಶಪಡಿಸುವುದನ್ನು ತಪ್ಪಿಸಲು ಜಮೀನಿಗೆ ರೈತರು ತೆರಳಿ ನಿತ್ಯ ರಾತ್ರಿ ಕಾವಲು ಕಾಯುವುದು ಕಾಯಕವಾಗಿದೆ ಇಲ್ಲವಾದರೆ ಬೆಳೆ ಕೈಗೆ ಸಿಗುವುದಿಲ್ಲ ಎಂಬ ಆತಂಕ ಭೀಮಸಮುದ್ರ ಗ್ರಾಮದ ರೈತರದ್ದು ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಬೆಳೆ ನಾಶದ ರೈತರಿಗೆ ಪರಿಹಾರ ಧನ ವಿತರಿಸಿ ಕೊಡಬೇಕೆಂದು ಗ್ರಾಮದ ರೈತರದ ಡಿ. ಟಿ. ನಾಗರಾಜ್, ಎಂ ಪ್ರಸನ್ನ ಕುಮಾರ್, ಸುನಿಲ್ ಕುಮಾರ್, ಸುರೇಶ್ ಬಾಬು, ಸಂಪತ್ ಕುಮಾರ್, ಮಲ್ಲಿಕಾರ್ಜುನ್, ಎಂ. ಪ್ರಮೋದ್, ಕುಬೇರ, ವೈ. ಬಿ ಬಸವರಾಜ್, ಪೂಜಾರಿ ಕರಿಯಪ್ಪ, ಸಿಂಗಲ್ ಕರಿಯಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಚನ್ನಪ್ಪ ರೈತರ ಪರವಾಗಿ ಆಗ್ರಹಿಸಿದರು..

 


ವರದಿ:- ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend