ಕೊಟ್ಟ ಮಾತಿನಂತೆ ಚರಂಡಿ ಮತ್ತು ಮೇಲ್ಛಾವಣಿಯ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಜುಮ್ಮೋಬನಹಳ್ಳಿ – ಮ್ಯಾಸರಹಟ್ಟಿ ಗ್ರಾಮದ ಶ್ರೀ ಮಲಿಯಮ್ಮ ದೇವಸ್ಥಾನ ಮುಂಭಾಗದಲ್ಲಿ ಚರಂಡಿ ಅಭಿವೃದ್ಧಿ ಮತ್ತು ಮೇಲ್ಛಾವಣಿಯ ನಿರ್ಮಾಣ ( 90 ಲಕ್ಷಗಳ ಕಾಮಗಾರಿ) ಭೂಮಿಪೂಜೆಯನ್ನು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 11-09-24 ರಂದು ನೆರವೇರಿಸಿದ ಬಳಿಕ ಮಾತನಾಡಿದರು. ನಾನು ಈ ಹಿಂದೆಯೇ ಶ್ರೀ ಮಲಿಯಮ್ಮ ದೇವಿ ಜಾತ್ರೆಯ ಸನ್ನಿಧಿಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುವೆ ಎಂಬ ಮಾತು ಕೊಟ್ಟಿದ್ದೆ. ಅದರಂತೆಯೇ ಈ ದಿನ ದೇವಸ್ಥಾನ ಸುತ್ತ ಮುತ್ತಲು ಒಂದು ಸುಂದರ ಪರಿಸರ ನಿರ್ಮಿಸಲು ಮತ್ತು ಸ್ವಚ್ಚತೆಗೆ ಆಧ್ಯತೆ ಕೊಡುವ ನಿಟ್ಟಿನಲ್ಲಿ ಚರಂಡಿ ವ್ಯವಸ್ಥೆ , ಮೇಲ್ಛಾವಣಿಯ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ* ಎಂದರು. ಶ್ರೀ ಮಲಿಯಮ್ಮ ದೇವಿಯ ಭಕ್ತಾದಿಗಳಿಗೆ ತೊಂದರೆಯಾಗದಂತೆ ಮನಗಂಡು ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡಲಾಯಿತು. ಭೂಮಿಪೂಜೆ ನೆರವೇರಿಸಿದ ನಂತರ ಊರಿನ ಕುಂದುಕೊರತೆಗಳನ್ನೂ, ಆಲಿಸಿ ಅವುಗಳ ಅಭಿವೃದ್ಧಿಗೆ ಒತ್ತುಕೊಡುವುದಾಗಿ ಶಾಸಕರು ತಿಳಿಸಿದರು.
ಕಾಂಗ್ರೆಸ್ ಮುಖಂಡರು ಹಾಗೂ ಸಂಘಟನೆಯಕಾರ ಓಬಣ್ಣನವರು ಮಾತನಾಡಿ, ನಾವು ನಿರೀಕ್ಷೆ ಇಟ್ಟುಕೊಂಡಿರುವುದಕ್ಕಿಂತ ಮೀರಿ ನೀವು ಅನುದಾನ ತಂದು ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಕೈಗೊಂಡಿರುವುದು ತುಂಬಾ ಹೆಮ್ಮೆಯ ಸಂಗತಿ. ಅಷ್ಟೇ, ನಿಮ್ಮ ಮೇಲೆ ನಮಗೆ ನಿರೀಕ್ಷೆ ಮತ್ತು ಆಶಾ ಭಾವನೆ ಇದೆ. ನೀವೂ ನಮ್ಮೂರಿನ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂಬುದಾಗಿ ಮೌಖಿಕವಾಗಿ ಶಾಸಕರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜುಮ್ಮೋಬನಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಸಾಕಮ್ಮ ಓಬಣ್ಣ, ಮಾಜಿ ತಾ.ಪಂ. ಸದಸ್ಯರಾದ ಶ್ರೀಮತಿ ನೇತ್ರಮ್ಮ ಓಬಣ್ಣ ನವರು, ಉಪಧ್ಯಾಕ್ಷರು, ಸರ್ವಸದಸ್ಯರು ಮತ್ತು ಮುಖಂಡರಾದ ಸೂರ್ಯಪ್ರಕಾಶ, ಪಾಪಜ್ಜ, ಶರಣೇಶ, ಈಮಂತರಾಜ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಅನಿಲ್ ಹುಲಿಕುಂಟೆ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030