ಸಂಡೂರು ಬೈ ಎಲೆಕ್ಷನ್ ಬಿಜೆಪಿ ವಿರುದ್ಧ ಬಂಡಾಯವೆದ್ದ ಟೀ ಯರಿಸ್ವಾಮಿ…!!!

Listen to this article

ಬಿಜೆಪಿ ವಿರುದ್ಧ ಬಂಡಾಯವೆದ್ದ ಟೀ ಯರಿಸ್ವಾಮಿ… ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದ ಯರಿಸ್ವಾಮಿ ಟಿ ಇವರು ಇಂದು ತಾಲೂಕು ಕಚೇರಿಗೆ ತೆರಳಿ ಬಿಜೆಪಿ ವಿರುದ್ಧ ಬಂಡಾಯದ ನಾಮಪತ್ರವನ್ನು ಸಲ್ಲಿಸಿದ್ದಾರೆ. ಮಾಧ್ಯಮ ರೋಟ್ಟಿಗೆ ಮಾತನಾಡಿದ ಯಾರಿಸ್ವಾಮಿ. 2023ರ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುತ್ತೇವೆ ಎಂದು ಆಸೆ ಹುಟ್ಟಿಸಿ, ಕೊಟ್ಟಿಲ್ಲ. ಪುನನಾನು ಮನವಿ ಮಾಡಿಕೊಂಡಾಗಲೂ ನನಗೆ ಟಿಕೆಟ್ ದೊರಕಲಿಲ್ಲ. ಇದಲ್ಲದೆ ಬಿಜೆಪಿ ಪಕ್ಷ ಈ ಬಾರಿಯೂ ಸ್ಥಳೀಯರಿಗೆ ಟಿಕೆಟ್ ಕೊಡದೆ. ಬೇರೊಂದು ತಾಲೂಕಿನ ವ್ಯಕ್ತಿಗೆ ಟಿಕೆಟ್ ಕೊಟ್ಟಿರುವುದು ನನಗೆ ಬೇಸರ ಉಂಟಾಗಿದೆ. ಒಂದು ವೇಳೆ ಪಕ್ಷದ ಪರವಾಗಿ ಸ್ಥಳೀಯರಿಗೆ ಟಿಕೆಟ್ ಕೊಟ್ಟಿದ್ದರೇ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಪಕ್ಷದ ಪರವಾಗಿ ನಿಂತು ಕೆಲಸ ಮಾಡಿ ಪಕ್ಷವನ್ನ ಗೆಲ್ಲಿಸುತ್ತಿದ್ದೇವೆ. ಆದರೆ ಬಿಜೆಪಿ ಪಕ್ಷದವರು ದುಡ್ಡು ಇರೋರಿಗೆ ಮಾತ್ರ ಟಿಕೆಟ್ ಕೊಡ್ತಾರೆ. ದುಡ್ಡಿಲ್ಲದ ವ್ಯಕ್ತಿಗಳನ್ನ ಕಾರ್ಯಕರ್ತರನ್ನ ಒಂದು ರೀತಿಯಲ್ಲಿ ನೋಡಿ ಅವರನ್ನು ದೂರ ಇಡುವ ಕೆಲಸ ಮಾಡಿದ್ದಾರೆ. ಇದು ನೋವು ನನಗಾಗಿದೆ ,ಅದಕ್ಕೋಸ್ಕರ ನಾನು ಬಿಜೆಪಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಆಸೆ ಏನೆಂದರೆ ಸಂಡೂರಿನಲ್ಲಿ ವೈದ್ಯಕೀಯ ಕಾಲೇಜನ್ನು ಕಟ್ಟುವ ಕನಸಿದೆ ಮತ್ತು ಸಂಡೂರು ಅಭಿವೃದ್ಧಿಯ ಗುರಿಯನ್ನು ನಾನು ಇಟ್ಟುಕೊಂಡಿದ್ದೇನೆ.ನಾನು ಬಿಜೆಪಿ ವಿರುದ್ಧವೇ ಬಂಡಾಯ ಎದ್ದಿದ್ದೇನೆ….

ವರದಿ ಕಾಶಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend