ಸಂಡೂರು ತಾಲೂಕಿನ ಅಂಕಮ್ಮನಾಳ ಗ್ರಾಮದಲ್ಲಿ ಇಂದು ನಡೆದ ಉಪಚುನಾವಣೆಯ ಪ್ರಚಾರ ಸಭೆ ಬಿರುಸಿನಿಂದ ನೆರವೇರಿತು.
ನಮ್ಮ ನಾಯಕರು, ಗಂಗಾವತಿ ಶಾಸಕರಾದ ಶ್ರೀ ಗಾಲಿ ಜನಾರ್ಧನ ರೆಡ್ಡಿ ಹಾಗೂ ಸಂಡೂರಿನ ಪ್ರಮುಖ ನಾಯಕರಾದ ಶ್ರೀ ಕೆ.ಎಸ್.ದಿವಾಕರ ಅವರೊಡನೆ ಮತಯಾಚನೆ ಮಾಡಿದೆ. ಸಾಮೂಹಿಕ ನಾಯಕತ್ವದಡಿಯಲ್ಲಿ ಈ ಬಾರಿ ಕಮಲ ಅರಳಲಿದೆ, ಸಂಡೂರಿನ ಚಿತ್ರಣ ಬದಲಾಗಲಿದೆ.
ಸಂಡೂರು ತಾಲೂಕಿನ ಜನತೆಯ ಆಶಾಭಾವನೆಗೆ ತಕ್ಕಂತೆ ಮತ್ತು ವಿಕಸಿತ ಭಾರತಕ್ಕಾಗಿ ಅಭಿವೃದ್ಧಿಯುತ ಸಂಡೂರು ನಿರ್ಮಾಣಕ್ಕೆ ಬಿಜೆಪಿ ಪಕ್ಷ ಕಾರ್ಯ ನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಅನಿಲಕುಮಾರ ಮೋಕ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಕಾರ್ತಿಕ್, ಹಿರಿಯರಾದ ಶ್ರೀ ಗಂಡಿ ಮಾರೆಪ್ಪ, ಶ್ರೀ ಜಿ ಮಾರೆಪ್ಪ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಸಣ್ಣ ಮಾರೆಪ್ಪ, ಶ್ರೀ ಗಂಡಿ ಕುಮಾರಸ್ವಾಮಿ, ಶ್ರೀ ಸಿ ಕುಮಾರಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು..
ವರದಿ.. ಕಾಶಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030