ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಪೂರ್ವಭಾವಿ ಸಭೆ ಯಶಸ್ವಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಣುಕಮ್ಮ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರಾದ ಇವರ ಅಧ್ಯಕ್ಷತೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯ ಸಭೆ ಕರೆಯಲಾಗಿದ್ದು ಈ ಪೂರ್ವಭಾವಿ ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರು ಯುವಕರು ಪಾಲ್ಗೊಂಡು ಪೂರ್ವಭಾವಿ ಸಭೆ ಯಶಸ್ವಿಗೊಳಿಸುವ ಮುಖಾಂತರ ಈ ಬಾರಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಿಯವರ ಜಯಂತೋತ್ಸವವನ್ನು ಅದ್ದೂರಿಯಾಗಿ ಮಾಡಲು ಈ ಎಲ್ಲಾ ಪಂಚಮಸಾಲಿ ಹಿರಿಯರು ಸೂಚಿಸಿದರು ಸಿದ್ದಾರಾಧ್ಯ ಶಿಕ್ಷಕರು ಇಂಥ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಬೇಕೆಂದು ಸಲಹೆ ಸೂಚನೆ ತಿಳಿಸಿದರು
ವೀರ ರಾಣಿ ಕಿತ್ತೂರು ಚೆನ್ನಮ್ಮ ಸಮಾಜಕ್ಕೇ ಸೀಮಿತ ಆಗದೆ ಎಲ್ಲಾ ಹೆಣ್ಣುಮಕ್ಕಳಿಗೆ ವೀರಮತೆಯಾಗಿ ಕೆಚ್ಚೆದೆಯ ಹೋರಾಟದಿಂದ ಎಲ್ಲರಿಗೂ ಸ್ಪೂರ್ತಿ ಆಗಿ ನಾಡಿಗೆ ಮಾದರಿ ಹೆಣ್ಣಾಗಿ ವೀರ ಮರಣ ಹೊಂದಿದರು.
ಅವರ ನೆನಪಿಗಾಗಿ ಕಳೆದ 4 ವರ್ಷದಿಂದ ನಮ್ಮ ಬೇಡಿಕೆ ನಮ್ಮ ತಾಲೂಕಿನಲ್ಲಿ ಸರ್ಕಲ್ ಘೋಷಣೆ ಮಾಡಿ ಎಂದು
ಈ ದಿನ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರು ಸುನೀಲ್ ಗೌಡ್ರು ಮತ್ತು ತಾಲೂಕು ಪಂಚಮಸಾಲಿ ಸಾಮಾಜದ ಅಧ್ಯಕ್ಷರು ರೇವಣ್ಣ ಹಾಗೂ ಸಮಾಜದ ಹಿರಿಯ ಮುಖಂಡರ ನೇತ್ರತ್ವದಲ್ಲಿ
ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಈ ಬಾರಿ ಜಯಂತಿ ಅಂಗವಾಗಿ ಕೊಟ್ಟೂರು ರಸ್ತೆಯಲ್ಲಿ ಸರ್ಕಲ್ ಸೂಚಿಸಿದ ಹಾಗೆ ನಾಮಫಲಕ ಅಳವಡಿಸಿ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್ ಎಂದು ಆದೇಶ ಹೊರಡಿಸಬೇಕು ಎಂದು ಎಲ್ಲಾ ಹಿರಿಯ ಮುಖಂಡರ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು
ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಕಾವಲ್ಲಿ ಶಿವಪ್ಪನಾಯಕ ಅಣ್ಣ ಮಾತನಾಡಿ ತುರ್ತು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕೊಟ್ಟೂರು ರಸ್ತೆಯ ಸರ್ಕಲ್ ಆಲ್ಲಿ ಭಾವಚಿತ್ರ ಪೂಜೆ ನೆರವೇರಿಸಿ ಅಲ್ಲಿಂದ ಮೆರವಣಿಗೆ ಚಾಲನೆ ನೀಡುವ ಮೂಲಕ ಜಯಂತಿ ಆಚರಿಸಬೇಕು ಎಂದು ತೀರ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು ರೇಣುಕಮ್ಮ ಶಿವರಾಜ್ ಪಾಲ್ತೂರ್ ನೌಕರರ ಘಟಕ ಅಧ್ಯಕ್ಷರು ಕೊಗಳಿ ಮಂಜುನಾಥ ಮರಬಾದ ಶಿವಣ್ಣ ಸಿಪಿಐ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಸುನಿಲ್ ಗೌಡ್ರು ಹಾಗೂ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರೇವಣ್ಣ ಹುಳಿಹಾಳ ಬ್ಯಾಳಿ ವಿಜಯ್ ಕುಮಾರ್ ಗೌಡ ಎರಿಸ್ವಾಮಿ ಬಣಕಾರ್ ವೀರಭದ್ರಪ್ಪ ಖಾನಾವಳಿ ಕೊಟ್ರೆಶಪ್ಪ ಶಾಸಕರ ಆಪ್ತರಾದ ಮರಳು ಸಿದ್ದಪ್ಪ ಎಂ ಬಣಕಾರ್ ಚಿನ್ನಾಪುರಪ್ಪ ವಿಭೂತಿ ಈರಣ್ಣ ಮಠಪತಿ ಮಂಜುನಾಥ ಬಣಕಾರ ಮೂಗಪ್ಪ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ ಪೂರ್ವಭಾವಿ ಸಭೆ ಯಶಸ್ವಿಗೊಳಿಸಿದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030