ಈ ದಿನ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ವಿಜಯನಗರ ಜಿಲ್ಲೆ ಹಾಗೂ ನೂತನ ತಾಲೂಕು ಘಟಕಗಳ ರಚನಾ ಸಭೆಯ ಪೂರ್ವಭಾವಿ ಸಭೆಯನ್ನು ಎನ್.ಜಿ.ವೀರೇಶ್ ಮಹಾಜನದಹಳ್ಳಿ ಯವರ ಸಹಕಾರದೊಂದಿಗೆ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ನೇತೃತ್ವದಲ್ಲಿ ಸಭೆ ಮಾಡಲಾಯಿತು.ಅತಿ ಶೀಘ್ರದಲ್ಲಿ ಹೂವಿನಹಡಗಲಿ ತಾಲೂಕು ಘಟಕವನ್ನ ರಚನೆ ಮಾಡಿಕೊಂಡು ನಂತರ ತಾಲೂಕಿನಾದ್ಯಂತ ಗ್ರಾಮ ಘಟಕಗಳ ರಚನೆ ಮಾಡುವ ಸಂಕಲ್ಪ ದೊಂದಿಗೆ ಒಕ್ಕೊರಲಿನಿಂದ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಗೌರಧ್ಯಕ್ಷರಾದ ಎಸ್.ಎಮ್ ಬಸರಾಜಯ್ಯ ಸ್ವಾಮಿ, ತಾಲೂಕು ಅಧ್ಯಕ್ಷರಾದ ನಾಗರಾಜ್ ಗೌಡ್ರು, ತಾಲೂಕು ಕಾರ್ಯಾಧ್ಯಕ್ಷರಾದ ದೇವರಮನಿ ನೀಲಪ್ಪ, ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್.ಆರ್ ಹಾಗೂ ಸ್ಥಳೀಯರಾದ ಮಂಜಪ್ಪ ಕೊಗನೂರು, ನಿಂಗಪ್ಪ ತಳವಾರ, ದುರ್ಗಪ್ಪ ಹೊಸಮನಿ, ತಳವಾರ ರಾಜಶೇಖರ್, ಮಾರುತಿ, ನಿಂಗರಾಜ, ಇನ್ನೂ ಮುಂತಾದವರು ಹಾಜರಿದ್ದರು…
ವರದಿ. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030