ತಡಕಲ್ ಗ್ರಾಮದಲ್ಲಿ ಶರನ್ನವರಾತ್ರಿಯ ವಿಶೇಷ ಪೂಜೆ
ಮಾನವಿ: ತಾಲ್ಲೂಕಿನ ತಡಕಲ್ ಗ್ರಾಮದಲ್ಲಿ ಬನ್ನಿಮಹಾಂಕಾಳಿ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಒಂಭತ್ತು ದಿನಗಳ ಪರ್ಯಂತ ಬನ್ನಿ ಮಹಾಂಕಾಳಿ ದೇವಿ ಮೂರ್ತಿಗೆ ಅಲಂಕಾರ ಮಾಡಿ, ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಇಂದು ಕೊನೆಯ ದಿನದ ವಿಶೇಷ ಪೂಜೆಯಲ್ಲಿ ಊರಿನ ಸುಮಂಗಲೆಯರು ವಿಶೇಷವಾಗಿ ದೇವಿಗೆ ಹುಡಿ
ತುಂಬಿದರು. ತಾಯಿ ಜಗನ್ಮಾತೆ ಎಲ್ಲರ ಜೀವನದ ಸಂಕಷ್ಟಗಳು ತಾಪತ್ರೆಯಗಳು ತೊಲಗಿ ಎಲ್ಲರ ಬಾಳಲ್ಲಿ ಸುಖ ಸಮೃಧ್ಧಿ ಸಂತೋಷ ಆರೋಗ್ಯ ಕರುಣಿಸಲಿ ಎಂದು ಮಾತೆಯರು ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದರು..
ವರದಿ. ಲಿಂಗರಾಜ್ ತಡಕಲ್,ಮಾನವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030