ಕೂಡ್ಲಿಗಿ, ಗಂಡ ಬೊಮ್ಮನಹಳ್ಳಿ: ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ ಡಾ” ಎನ್.ಟಿ.ಶ್ರೀನಿವಾಸ್…!!!

Listen to this article

ಕೂಡ್ಲಿಗಿ, ಗಂಡ ಬೊಮ್ಮನಹಳ್ಳಿ: ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ ಡಾ” ಎನ್.ಟಿ.ಶ್ರೀನಿವಾಸ್ -ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ, ಕ್ಷೇತ್ರದ ದೊಡ್ಡ ಕೆರೆ ಎಂದೇ ಹೆಸರಾದ ಗಂಡಬೊಮ್ಮನಹಳ್ಳಿ ಕೆರೆಗಳು. ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ, ಅಕ್ಟೋಬರ್‌ 8ರಂದು, ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಎರೆಡೂ ಕೆರೆಗಳಿಗೆ ಬಾಗಿನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದರು.


ಬಳಿಕ ಅವರು ಮಾತನಾಡಿ,
ಬರದ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು. ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ, ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ. ಇದರಿಂದಾಗಿ ರೈತರಲ್ಲಿ ಹರ್ಷ ತಂದಿದೆ, ರೈತರ ಕ್ಷೇಮವೇ ನಾಡಿನ ಕ್ಷೇಮ ಎಂದರು. ಕೆರೆಯ ಸಂರಕ್ಷಣೆ, ಮೀನುಗಾರಿಕೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಲಾಗಿದೆ. ಕರೆಗಳ ಕ್ಷೇಮಾಭಿವೃದ್ಧಿ ಪಡಿಸುವಲ್ಲಿ ಇಲಾಖಾಧಿಕಾರಿಗಳು, ಸರ್ಕಾರದಿಂದ ಅಗತ್ಯ ಅನುದಾನಗಳನ್ನು ಪಡೆದು ಕೆಲಸ ಮಾಡಬೇಕಿದೆ ಎಂದರು. ಗ್ರ‍ಾಮ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು, ಹಾಗೂ ವಿವಿದ ಜನ ಪ್ರತಿನಿಧಿಗಳೊಂದಿಗೆ. ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ, ಕೆರೆ ಅಭಿವೃದ್ಧಿ ಕುರಿತಂತೆ ವಿಚಾರ ಮಂಥನ ನಡೆಸಿದರು. ಶಾಸಕರು ಅಧಿಕಾರಿಗಳನ್ನುದ್ಧೇಶಿಸಿ, ಮೀನುಗಾರಿಕೆ ಇಲಾಖೆಯಿಂದ ಮೀನು ಹಾಗೂ ಜಲಚರ ಜೀವ ಸಂಕುಲ ಉಳಿಸಲು. ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ, ವಿಚಾರಿಸಿ ಚರ್ಚಿಸಿದರು. ಮತ್ತು ಜಿಲ್ಲಾ- ತಾಲೂಕಿನ ಮೀನುಗಾರಿಕೆ ಇಲಾಖೆ, ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು. ಗಂಡ ಬೊಮ್ಮನಹಳ್ಳಿ ಕೆರೆ ಸೇರಿದಂತೆ ತಾಲೂಕಿನ ಎಲ್ಲಾ ಕೆರೆಗಳಿಗೆ, ನಿಯಮಾನುಸಾರ ಭೇಟಿ ನೀಡಬೇಕಿದೆ. ಕೆರೆಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು, ಜೊತೆಗೆ ಸ್ಥಳೀಯರೊಂದಿಗೆ ಚರ್ಚಿಸಬೇಕು. ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಪಡೆದು, ಕೆರೆಯ ಕುಂದು ಕೊರತೆಗಳನ್ನು ಸಕಾಲಕ್ಕೆ ಬಗೆಹರಿಸಬೇಕು ಎಂದರು.
ಸಮಾಜ ಸೇವಕಿ ಶ್ರೀಮತಿ ಅನ್ನಪೂರ್ಣ ಈ ತುಕಾರಾಮ್ ಬಾಗೀನ ಅರ್ಪಣೆ-
ಅವಿಭಾಜ್ಯ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಈ ತುಕಾರಾಮ್ ರವರ, ಧರ್ಮಪತ್ನಿಯಾದ ಶ್ರೀಮತಿ ಅನ್ನಪೂರ್ಣ ತುಕಾರಾಂ ರವರು. ಇದೇ ಸಂದರ್ಭದಲ್ಲಿ ಗಂಡಬೊಮ್ಮನಹಳ್ಳಿ ಕೆರೆಗೆ ಆಗಮಿಸಿ, ಅವರು ಬಾಗಿನ ಅರ್ಪಿಸಿ ಗಂಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಕೂಡ್ಲಿಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ, ಪತಿ ಈ ತುಕಾರಾಮ್ ರವರು ಸದಾ ಸಹಕಾರ ನೀಡಲಿದ್ದಾರೆ. ಅದನ್ನು ಅವರ ಅನುಪ ಸ್ಥಿತಿಯಲ್ಲಿ ಅವರ ಪರವಾಗಿ, ತಾವು ಭರವಸೆ ವ್ಯಕ್ತಪಡಿಸುತ್ತಿರುವಾದಾಗಿ ಅವರು ತಿಳಿಸಿದರು.
ಜನರ ಜೀವನಾಡಿಯಾದ ಕೆರೆಗಳಿಗೆ ಬಾಗೀನ ಅರ್ಪಿಸುವ ಮೂಲಕ, ಗಂಗೆ ಪೂಜೆ ಗೈದು ಶ್ರದ್ಧಾ ಭಕ್ತಿ ಸಮರ್ಪಣೆ ಗೈಯ್ಯುವ ಜನಪ್ರತಿನಿಧಿಗಳು. ಈ ಮೂಲಕ ಕೆರೆಗಳ ಯೋಗ ಕ್ಷೇಮಕ್ಕಾಗಿ ಒತ್ತು ಕೊಡುತ್ತಿರುವುದು, ಗ್ರಾಮದ ಮುಖಂಡರಲ್ಲಿ ರೈತರಲ್ಲಿ, ಹಾಗೂ ಪರಿಸರವಾದಿಗಳು ಆಸ್ಥಿಕರಲ್ಲಿ ಹರ್ಷತಂದಿದೆ.
ಈ ಸಂದರ್ಭದಲ್ಲಿ ಮೀನುಗಾರಿಕೆಯ ಇಲಾಖೆಯ ಅಧಿಕಾರಿಗಳಾದ ಕೆ.ಎನ್.ಮಂಜುನಾಥ, ಮಲ್ಲೇಶ, ಮಲ್ಲನಾಯಕ, ಶ್ರೀ ಆಂಜನೇಯ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ಕಾಕಿ ಬಸಣ್ಣ, ಉಪಾಧ್ಯಕ್ಷರಾದ ಕೃಷ್ಣಪ್ಪ, ಕಾರ್ಯದರ್ಶಿ ಚೆನ್ನಪ್ಪ ಹಾಗೂ ಸರ್ವ ಸದಸ್ಯರು. ಮತ್ತು ನಿರ್ದೇಶಕರು, ರೈತರು ರೈತ ಸಂಘದ ಪದಾಧಿಕಾರಿಗಳು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪ ನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಯ್ಯದ್ ಶೂಕರ್ ಅಹಮದ್, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಗುರುಸಿದ್ದನಗೌಡ, ಪಟ್ಟಣ ಪಂಚಾಯ್ತಿ ಸದಸ್ಯರು, ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಓಬಮ್ಮ, ಉಪಾಧ್ಯಕ್ಷರಾದ ಬಸವರಾಜ. ಗ್ರಾಮ ಪಂಚಾಯ್ತಿ ಸರ್ವ ಸದಸ್ಯರು. ಬೆಳಗಟ್ಟ ಗ್ರಾಮ ಪಂ‌ಚಾಯ್ತಿ ಅಧ್ಯಕ್ಷರಾದ ಸಣ್ಣ ಓಬಮ್ಮ, ಹಾಗೂ ಸರ್ವ ಸದಸ್ಯರು. ಮುಖಂಡರಾದ ನರಸಿಂಹಗಿರಿ ಎಸ್ ವೆಂಕಟೇಶ, ಎನ್.ಟಿ.ತಮ್ಮಣ್ಣ. ಗುಂಡುಮುಣುಗು ಮಂಜಣ್ಣ, ಆಶಾಲತಾ, ಗೊಂಚಿಕಾರು ಬೋರಣ್ಣ, ಜಿ.ಬಿ.ವೆಂಕಟೇಶ, ಎಂ.ಪಿ. ಚಂದ್ರಣ್ಣ, ಗೋ ಓಬಣ್ಣ, ದ್ಯಾಮಣ್ಣ, ಬೋಸಣ್ಣ, ಹಾಲಸಾಗರ ಮಂಜಣ್ಣ, ಮಾರೇಶ, ಶರಣಪ್ಪ, ಎಸ್.ಪಿ. ಬೋರಯ್ಯ, ಅನಂತ ಕುಮಾರ್, ಸೂರ್ಯಪ್ರಕಾಶ, ವೆಂಕಟೇಶ, ಬುಡ್ಡಾರೆಡ್ಡಿ, ಹುಲಿಕುಂಟೆ ನಾಗರಾಜ, ಪೇಯಿಂಟ್ ಬಸವರಾಜ, ಪೀಲಿ ಬೋರಯ್ಯ, ಮಹಾದೇವಣ್ಣ, ಬಷೀರ್, ಹೊನ್ನೂರುಸ್ವಾಮಿ, ಎ. ನಾಗರಾಜ, ಜಿ.ಬಿ.ಓಬಣ್ಣ, ಆರ್.ಕೆ.ಬಸಣ್ಣ, ಚಿನ್ನಸ್ವಾಮಿ, ಪಸಲು ಪಾಲಯ್ಯ ಇನ್ನೂ ಮುಂತಾದವರು, ಗ್ರಾಮ ಹಾಗೂ ನೆರೆ ಹೊರೆ ಗ್ರಾಮಗಳ ರೈತರು. ಯಜಮಾನರು, ಮಹಿಳೆಯರು, ಯುವಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend