ಶ್ರೀ ಪಾಶ್ವ೯ನಾಥ ಸ್ವಾಮಿ ಜಿನ ಮಂದಿರದ ಬಸದಿಯಲ್ಲಿ ವಿಶೇಷ ಅಲಂಕಾರ
ಹೂವಿನ ಹಡಗಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ
ದಸರಾ- ಬಸದಿಯಲ್ಲಿ ವಿಶೇಷ ಅಲಂಕಾರ
ಹೂವಿನ ಹಡಗಲಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯ 1008 ಭಗವಾನ್ ಶ್ರೀ .ಪಾರ್ಶ್ವ ನಾಥ ತೀರ್ಥಂಕರರ ಬಸದಿಯಲ್ಲಿ (ಐದನೇ) ದಿನದ ಶರನ್ನವರಾತ್ರಿಯ ಶ್ರೀ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಿಶೇಷವಾಗಿ ಅಲಂಕರಿಸಲಾಗಿತ್ತು.
ಸೀಮಾ ಪ್ರಶಾಂತ್ ಹೊಳಲು ಕರ್ನಾಟಕ ಜೈನ ಮಹಿಳಾ ಒಕ್ಕೂಟ ಬೆಂಗಳೂರು ಕಾರ್ಯಕಾರಿ ಮಂಡಳಿ ಸದಸ್ಯರು ಇವರ ಪ್ರಾಯೋಜಕತ್ವದಲ್ಲಿ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು.
ಸಂಜೆ ನಡೆದ ನಗೆ ಹಾಸ್ಯ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ಹೊಳಲು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಬದುಕಿನ ನಿತ್ಯ ಜಂಜಾಟ ಮರೆಯಲು ಹಾಸ್ಯದಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಾಸ್ಯದ ವಿವಿಧ ತುಣುಕುಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಬಿಂಬಿಸುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಜೈನ ಸಮಾಜದ ಅಧ್ಯಕ್ಷ ಹೆಚ್ ಎಸ್ ಪ್ರಶಾಂತ್, ಉಪಾಧ್ಯಕ್ಷ ವಿಜಯಕುಮಾರ್, ಹೆಚ್ ಡಿ ಅಜಿತ್, ಎಂ ತವನಪ್ಪ , ಜ್ವಾಲಾಮಾಲಿನಿ ಮಹಿಳಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು
ಇತರರು ಉಪಸ್ಥಿತರಿದ್ದರು..
ವರದಿ.. ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030