ವಿಜಯದಶಮಿ ಉತ್ಸವ: ಆಕರ್ಷಕ ಪಥಸಂಚಲನ..
ಗುಳೇದಗುಡ್ಡ: ವಿಜಯದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ರವಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದದಿಂದ ಘೋಷದೊಂದಿಗೆ ಘಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು. ನಗರದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಿಂದ ಮಧ್ಯಾಹ್ನ 3.45 ಗಂಟೆಗೆ ಆರಂಭಗೊಂಡ ಪಥಸಂಚಲನ ನಗರದ ಕೆಳಗಿನ ಮಾರ್ಕೆಟ್, ಹರದೊಳ್ಳಿ, ಸಾಲೇಶ್ವರ ದೇವಸ್ಥಾನ, ಪವಾರ ಕ್ರಾಸ್, ಪುರಸಭೆ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿ ಪೇಟೆಯ ಮೂಲಕ ಹಾಯ್ದು ಭಂಡಾರಿ ಕಾಲೇಜು ಮೈದಾನ ತಲುಪಿತು. ಪಥಸಂಚಲನದಲ್ಲಿ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಗಮಿಸಿದ ಗಣವೇಷದಾರಿ ಸ್ವಯಂಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಸೇರಿದ ಮಹಿಳೆಯರು, ಮಕ್ಕಳು ಹರ್ಷೋದ್ಘಾರದಿಂದ ಪಥಸಂಚಲವನ್ನು ಸ್ವಾಗತಿಸಿದರು.
ಎಲ್ಲೆಲ್ಲೂ ಕೇಸರಿಮಯ: ಪಥಸಂಚಲ ಸಾಗುವ ದಾರಿಗುಂಟ ನಗರದ ಕಟ್ಟಡಗಳ ಮೇಲೆ ಭಗವಾಧ್ವಜಗಳು ರಾರಾಜಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಸ್ವಯಂ ಸೇವಕರ ಮೇಲೆ ಹೂಮಳೆಗರೆದು ಹರ್ಷವ್ಯಕ್ತಪಡಿಸಿದರು. ಅಲ್ಲಲ್ಲಿ ವೀರಪುಲಕೇಶಿ, ವೀರಸಾರ್ವಕರ, ಭಗತ್ ಸಿಂಗ, ಪ್ರಮೋದ ಮುತಾಲಿಕ, ಸರದಾರ ವಲ್ಲಭಾಯಿ ಪಟೇಲ, ಶಿವಾಜಿ, ಮಹಾರಾಣಾ ಪ್ರತಾಪಸಿಂಗ್, ಡಾ. ಅಂಬೇಡ್ಕರ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಮುಖ್ಯರಸ್ತೆಯಲ್ಲಿ ಶ್ರೀರಾಮ, ಶಿವಾಜಿ, ಗೋವುಹಾಗೂ ಕರು, ಭಾರತಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಾಜಿ, ಸುಭಾಷಚಂದ್ರ ಭೋಸ್, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಭಗತ್ಸಿಂಗ್, ಶ್ರೀರಾಮ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು.
ಪಥಸಂಚಲನದಲ್ಲಿ ಬಸವರಾಜ ಕುಂಬಾರ, ಬಸವರಾಜ ಒಣರೊಟ್ಟಿ, ಈರಣ್ಣ ಕಂಠಿ, ಈರಣ್ಣ ಬಂಡಿ, ಸಂಪತ್ತಕುಮಾರ ರಾಠಿ, ರವಿ ಸೇಬಿನಕಟ್ಟಿ, ಸಾಗರ ಮಲಜಿ, ವಿಠ್ಠಲ ಪತ್ತಾರ, ಭುವನೇಶ ಪೂಜಾರ, ವಿವೇಕಾನಂದ ದೇವಾಂಗಮಠ, ಪೋಲಿಸಪ್ಪ ರಾಮದುರ್ಗ, ವಿಜಯ ಕವಿಶೆಟ್ಟಿ,..
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030