ಜಯ ಕರ್ನಾಟಕ ಸಂಘಟನೆಯ ನಮ್ಮೆಲ್ಲರ ನೆಚ್ಚಿನ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಶ್ರೀ ಡಾ||ಬಿ.ಎನ್.ಜಗದೀಶ್ ಗೌಡರಿಗೆ ಸನ್ಮಾನ…!!!

Listen to this article

ಜಯ ಕರ್ನಾಟಕ ಸಂಘಟನೆಯ ನಮ್ಮೆಲ್ಲರ ನೆಚ್ಚಿನ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಶ್ರೀ ಡಾ||ಬಿ.ಎನ್.ಜಗದೀಶ್ ಗೌಡ ಅಣ್ಣನವರನ್ನು ಬೆಂಗಳೂರಿನ ಸಂಘಟನೆಯ ಕೇಂದ್ರ ಕಛೇರಿಯಲ್ಲಿ* ಭೇಟಿ ಮಾಡಿ ಸನ್ಮಾನಿಸಲಾಯಿತು. ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಪದಾಧಿಕಾರಿಗಳ ಮರು ಆಯ್ಕೆ ಮತ್ತು ತ್ವರಿತ ಗತಿಯಲ್ಲಿ ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲವರ್ಧನೆ ಮಾಡುವುದರ ಜೊತೆಗೆ ವಿಜಯನಗರ ಜಿಲ್ಲೆಗೆ ನೂತನ ಪದಾಧಿಕಾರಿಗಳ ನೇಮಕ ಮಾಡುವುದರ ಬಗ್ಗೆ ಚರ್ಚೆ ನಡೆಸಿದೆವು . ಸಂಘಟನೆಗಳು ನಿಂತ ನೀರಗಬಾರದು ಹರಿಯುವ ನೀರಾಗಬೇಕು ಸಂಘಟನೆಯಿಂದ ತುಂಬಾ ಒಳ್ಳೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ಸಮಾಜ ಸೇವೆ ಮಾಡಲು ಸಂಘಟನೆಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಎಂದು ತಿಳಿಸಿದರು. ಮತ್ತು ವಿಜಯನಗರ ಜಿಲ್ಲೆಯ ಜಿಲ್ಲಾ ಘಟಕವನ್ನು ಆದಷ್ಟು ಬೇಗ ರಚನೆ ಮಾಡಲು 5 ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಬೇಗ ಬೇಗ ಪ್ರತಿಯೊಂದು ತಾಲೂಕುಗಳಿಗೆ ಓಡಾಟ ಮಾಡಿ ಸಂಘಟನೆಯನ್ನು ಕಟ್ಟಿ ಎಂದು ಬೆಂಬಲವನ್ನ ಸೂಚಿಸಿದರು. ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷರು ಮುನಿ ಸ್ವಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಜತ್ ಗಗನ್ ತಾಲೂಕು ಘಟಕದ ಅಧ್ಯಕ್ಷರು ಕೆ ನಾಗರಾಜ್ ಗೌಡ್ರು ಕಾರ್ಯಾಧ್ಯಕ್ಷರು ದೇವರಮನಿ ನೀಲಪ್ಪ ಗ್ರಾಮ ಘಟಕದ ಅಧ್ಯಕ್ಷರು ಪ್ರಕಾಶ ಆರ್ ಹಾಗೂ ತಾಲೂಕು ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಇದ್ದರು…

ವರದಿ. ಸಂತೋಷ ಮ್ಯಾಗೇರಿ, ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend