ಗಣಿಧಣಿ ಎಂದು ಖ್ಯಾತಿ ಪಡೆದ ಜನಾರ್ದನ್ ರೆಡ್ಡಿ ಇವರು ಇಂದು ಸಂಡೂರಿಗೆಅಗಮಿಸಿ ಕುಮಾರಸ್ವಾಮಿ ದರ್ಶನ ಪಡೆದರು…!!!

Listen to this article

ಗಣಿಧಣಿ ಎಂದು ಖ್ಯಾತಿ ಪಡೆದ ಜನಾರ್ದನ್ ರೆಡ್ಡಿ ಇವರು ಇಂದು ಸಂಡೂರಿಗೆಅಗಮಿಸಿ ಬಂದಿರುವ ವಿಚಾರ ಈ ಹಿಂದೆ ಗಣಿ ವಿಚಾರವಾಗಿ ಜೈಲಲ್ಲಿದ್ದ ಇವರಿಗೆ ಕಾನೂನಿನಲ್ಲಿ ಬಳ್ಳಾರಿ ಜಿಲ್ಲೆ ಹೊರೆತುಪಡಿಸಿ ಇರುವಂತೆ ಆದೇಶಿಸಿತ್ತು ಮೊನ್ನೆ ಜನಾರ್ಧನ್ ರೆಡ್ಡಿ ಅವರನ್ನು ಬಳ್ಳಾರಿಗೆ ಬರಬಾರದು ಎಂದು ಇದ್ದ ಆದೇಶವನ್ನು ರದ್ದುಗೊಳಿಸಿ ಬಳ್ಳಾರಿಗೆ ಹೋಗುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕೋರ್ಟ್ಆದೇಶ ಮಾಡಿದ್ದರಿಂದ ಇಂದು ಸೊಂಡೂರಿನಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದ ದರ್ಶನಕ್ಕೆ ಬರುತ್ತೇನೆ ಎಂದು ಹೇಳಿದಾಗ ತಾಲೂಕಿನ ಹೃದಯ ಭಾಗದ ಜನರು ಸಂಡೂರಿನ ವಿಜಯ ಸರ್ಕಲ್ ನಲ್ಲಿ ಅವರನ್ನು ಬರಮಾಡಿಕೊಂಡರು ಅವರು ಬಂದು ಇದು ಮಾತನಾಡುವ ಸಮಯವಲ್ಲ ನಾನು ಬಹಳಷ್ಟು ಕೆಲಸಗಳನ್ನು ಸಂಡೂರು ತಾಲೂಕಿಗೆ ನನ್ನ ಸಮಯದಲ್ಲಿ ಮಾಡಿದ್ದೇನೆ ಹೊಸಪೇಟೆ ಸಂಡೂರು ಕೂಡ್ಲಿಗಿ ಸಂಡೂರು ಬಳ್ಳಾರಿ ಸಂಡೂರು ಹೋಗುವ ಹಾಗೂ ಸಂಡೂರು ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ನಮ್ಮ ಕಾಲದಲ್ಲಿ ಮಾಡಿದ್ದೆವು ಆದರೆ ಬೇರೆಯವರು ನಾವು ಮಾಡಿದ್ದೇವೆ. ಎಂದು ಹೇಳಿಕೊಳ್ಳುವ ಜನರಿಗೆ ಸುಳ್ಳು ರಾಜಕಾರಣ ಮಾಡುವಂತಹ ಜನರಿಗೆ ಶ್ರೀ ಕುಮಾರಸ್ವಾಮಿ ದೇವರು ಸರಿಯಾದ ಶಿಕ್ಷೆ ಕೊಡುತ್ತಾನೆ ಎಂದು ಮಾತನಾಡಿದರು.

ಆ ಸಮಯದಲ್ಲಿ ಬಂಗಾರ ಹನುಮಂತ ದಿವಾಕರ್ ಬಳ್ಳಾರಿ ಜಿ ಟಿ ಪಂಪಾಪತಿ ಸುರೇಶ್ ಕುಮಾರ್ ಸ್ವಾಮಿ ಕರಡಿ ವೀರೇಶ್ ತಾಲೂಕ ಅಧ್ಯಕ್ಷ ನಾನಾಸಾಬ್ ನಿ ಕಮ್ ಹಾಗೂ ಮಂಜುನಾಥ್ ಇನ್ನು ಮುಂತಾದ ಸ್ಥಳೀಯ ಪದಾಧಿಕಾರಿಗಳು ಬಹಳಷ್ಟು ಸಂಖ್ಯೆಯಲ್ಲಿ ಸೇರಿ ಅವರನ್ನು ಬರಮಾಡಿಕೊಂಡರು ನಂತರ ಶ್ರೀ ಕುಮಾರಸ್ವಾಮಿ ದೇವಸ್ಥಾನ ಕ್ಕೆ ಬಂದು ಸ್ವಾಮಿ ದರ್ಶನ ಪಡೆದು ಕೂಡ್ಲಿಗಿ ಕಡೆಗೆ ಹೋದರು…

ವರದಿ. ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend