ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮ ಪಂಚಾಯತಿಯ ಆವರಣದಲ್ಲಿ ತಾಳ್ಯ ಹೋಬಳಿಯ ಗ್ರಾಮ ಪಂಚಾಯತಿಗಳು ತಾಳ್ಯ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದ ವತಿಯಿಂದ ಸೋಮವಾರ ತಾಳ್ಯ ಗ್ರಾಮದಲ್ಲಿ ಆರೋಗ್ಯ ಶಿಭಿರದ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಗ್ರಾಮ ಗಳಲ್ಲಿ ಜನರು ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು, ಗ್ರಾಮ ಪಂಚಾಯತಿ ವತಿಯಿಂದ ಹಳ್ಳಿಗಳಲ್ಲಿ ಸ್ವಚ್ಚತೆಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಸಹ ಸ್ವಚ್ಚತೆಯಲ್ಲಿ ಪಾಲ್ಗೊಳ್ಳಬೇಕು ಎಂದು
ಶಿಭಿರವನ್ನು ಉದ್ಘಾಟನೆ ಮಾಡಿ ಮಾತಬಾಡಿದ ಸಮುದಾಯದ ಆರೋಗ್ಯ ಇಲಾಖೆಯ ಅಧಿಕಾರಿ ರಂಗಸ್ವಾಮಿ ತಿಳಿಸಿದರು. ಗ್ರಾಮಗಳಲ್ಲಿ ಶುದ್ದವಾದ ನೀರನ್ನು ಒದಗಿಸಲಾಗುತ್ತಿದೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪೌಷ್ಟಿಕ ಆಹಾರವನ್ನು ಸೇವನೆ ಮಾಡಿ ನಮ್ಮ ಆರೋಗ್ಯ ಇಲಾಖೆಯ ವತಿಯಿಂದ ತಂಡಗಳನ್ನು ಮಾಡಿ ಲಾರ್ವ ಸರ್ವೆ ಮಾಡುತ್ತಿದ್ದೇವೆ ಟಿ ಬಿ ಖಾಯಿಲೆಯ ರೋಗಿಗಳಿಗೆ ಪ್ರತಿ ವಾರ ಆರೋಗ್ಯ ತಪಾಸಣೆ ನಡೆಸಿ ಮಾತ್ರೆಗಳನ್ನು ನೀಡುತ್ತಿದ್ದೇವೆ ಎಂದರು. ಕಾರ್ಯ ಕ್ರಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಸಿಬಂಧಿಗಳು ಹಾಗೂ ಸಾರ್ವಜನಿಕರಿಗೆ ಬಿ ಪಿ ಶುಗರ್ ಟೆಸ್ಟ್ ಮಾಡಿ ಮಾತ್ರೆಗಳನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳಾದ ಶುಭ, ಅಂಜಿನಪ್ಪ, ಗ್ರಾ ಪಂ ಅದ್ಯಕ್ಷರಾದ ಹಾಲಮ್ಮ ನಟರಾಜ್, ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ, ಶಿವಮೂರ್ತಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಪುಪ್ಪ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯತಿಯ ಸದಸ್ಯರು, ಸಿಬಂಧಿಗಳು, ಗ್ರಾಮಸ್ಥರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030