ವಿರೋಧ ಪಕ್ಷಗಳ ಕುತಂತ್ರ ಫಲಿಸಲ್ಲ
ಸಿದ್ದರಾಮಯ್ಯ ಸಾಹೇಬರು ಒಂದು ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕರು :ಆಸೀಫ್ ದೊಡ್ಮನೆ
ರಾಜ್ಯದ ಜನರಿಂದ ತಿರಸ್ಕೃತಗೊಂಡ ಬಿಜೆಪಿ ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರಗಳು ಕಳಿಸುವುದಿಲ್ಲ ಎಂದು
ಕೆಪಿಸಿಸಿ ಸಾಮಾಜಿಕ ಜಾಲ ತಾಣ ಸಂಡೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ *ಆಸೀಫ್ ದೊಡ್ಮನೆ* ಅವರು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ದರಾಮಯ್ಯ ಅವರ 40 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಕಪ್ಪು ಚುಕ್ಕೆ ಇಲ್ಲದ ಪ್ರಾಮಾಣಿಕತೆ ಅವರದು ಮೋಡ ವಿಚಾರದಲ್ಲೂ ಅವರದು ಭ್ರಷ್ಟಾಚಾರದ ಪಾತ್ರವಿಲ್ಲ. ಎಲ್ಲಿಯೂ ಅವರ ಹಸ್ತಕ್ಷೇಪ ಇಲ್ಲದಿದ್ದರೂ ಕೇವಲ ರಾಜಕೀಯ ದುರುದ್ದೇಶದಿಂದ ಅವರ ಹೆಸರಿಗೆ ಮಸಿ ಬಳಿಯುವ ಹೊನ್ನಾರ ನಡೆದಿರೋದು ಖಂಡನೀಯ ರಾಜ್ಯಪಾಲರು ಕೂಡ ತರಾತುರಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ. ನ್ಯಾಯಾಲಯದಲ್ಲಿ ತನಿಖೆಗೆ ಅನುಮತಿ ದೊರೆತಿದೆ ವಿನಃ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ . ವಿರೋಧ ಪಕ್ಷಗಳ ಸಂತಸ ತಾತ್ಕಾಲಿಕ ಮಾತ್ರ . ಸಿದ್ದರಾಮಯ್ಯನವರು ಲೋಕಾಯುಕ್ತ ಸೇರಿದಂತೆ ಎಲ್ಲಾ ತನಿಖೆಗೆ ಸಹಕರಿಸುತ್ತಿದ್ದಾರೆ. ಸತ್ಯ ಹೊರಬಂದು ಷಡ್ಯಂತರ ಮಾಡುವವರಿಗೆ ಬ್ರಹ್ಮನಿರಸನವಾಗುವುದರಲ್ಲಿ ಸಂಶಯವಿಲ್ಲ ಎಂದರು . ಮೂಡ ವಿಚಾರದಲ್ಲಿ ಸರ್ಕಾರದ ಸಂಪುಟ ಸಚಿವರು ಕಾಂಗ್ರೆಸ್ನ 136 ಶಾಸಕರು ಸಂಸದರು ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದು ಸಿಎಂ ಬೆನ್ನ ಹಿಂದೆ ರಾಜ್ಯದ ಜನ ಹಾಗೂ ಇಡೀ ಕಾಂಗ್ರೆಸ್ ಪಕ್ಷವಿದೆ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಬಿಜೆಪಿ ಜೆಡಿಎಸ್ ಮುಖ್ಯಮಂತ್ರಿಗಳ ರಾಜೀನಾಮೆಗೆ ಅಗ್ರಹಿಸಿ ಪ್ರತಿಭಟಿಸುತ್ತಿರುವುದು ಹಾಸ್ಯಸ್ಪದ ಎಂದು ಲೇವಡಿ ಮಾಡಿದರು. ಅನೇಕ ಹಗರಣಗಳಲ್ಲಿರುವ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆ ಪಡಿವ ತಾಕತ್ತು ಇದೆಯೇ? ಬಿಜೆಪಿಯ ಅನೇಕ ನಾಯಕರು ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ ಅವರ ರಾಜೀನಾಮೆ ಕೇಳಿ ಪ್ರತಿಭಟನೆ ಮಾಡಲು ಇವರಿಗೆ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಈ ಎರಡು ಪಕ್ಷಗಳಿಗೆ ರಾಜ್ಯದ ಜನತೆ ದೊಡ್ಡ ಪಾಠ ಕಲಿಸಲಿದ್ದಾರೆ ಎಂದರು .ಆಸೀಫ್ ದೊಡ್ಮನೆ ಅಧ್ಯಕ್ಷರು
ಕೆಪಿಸಿಸಿ ಸಾಮಾಜಿಕ ಜಾಲ ತಾಣ ಸಮಿತಿ ಸಂಡೂರು ವಿಧಾನ ಸಭಾ ಕ್ಷೇತ್ರ
ಜಿಲ್ಲಾಧ್ಯಕ್ಷರುಅಹಿಂದ ಕರ್ನಾಟಕ ಸಾಮಾಜಿಕ ಜಾಲತಾಣ ಬಳ್ಳಾರಿ ಜಿಲ್ಲಾ…
ವರದಿ, ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030