ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿವಹಿಸಿ: ಮುಬಾರಕ ಮಂಗಳೂರು
ಗುಳೇದಗುಡ್ಡ: ಕಣ್ಣು ಮಾನವನ ಅತ್ಯಂತ ಪ್ರಮುಖ ಅಂಗವಾಗಿದೆ. ಕಣ್ಣನ್ನು ಕಳೆದುಕೊಂಡರೆ ಜೀವನದಲ್ಲಿ ಬೆಳಕನ್ನು ಕಳೆದುಕೊಂಡಂತೆ. ಕಣ್ಣಿನಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡರೆ ತಾತ್ಸಾರ ಮಾಡದೇ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಅಹಿಂದ್ ಚಳುವಳಿ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಮುಬಾರಕ ಮಂಗಳೂರ ಹೇಳಿದರು.
ಅವರು ಸೋಮವಾರ ಇಲ್ಲಿನ ಶಾದಿಮಹಲ್ನಲ್ಲಿ ಈದಮಿಲಾದ ಹಬ್ಬದ ಅಂಗವಾಗಿ ಜೆಇಸಿಓ ಪೌಂಡೇಶನ ಹಾಗೂ ಬಾದಾಮಿಯ ಎಂ.ಎಂ. ಜೋಶಿ ನೇತ್ರಚಿಕಿತ್ಸಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಕಣ್ಣಿನ ತೊಂದರೆಗೆ ಸ್ವಯಂ ಚಿಕಿತ್ಸೆ ಮಾಡಬಾರದು. ಕಣ್ಣು ಸೂಕ್ಷ್ಮ ಅಂಗವಾಗಿದ್ದರಿಂದ ವ್ಯತಿರಿಕ್ತ ಪರಿಣಾಮ ಬೀರಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳಬಹುದು ಎಂದರು. ಶಿಬಿರದಲ್ಲಿ 48 ಜನ ಭಾಗವಹಿಸಿ ಚಿಕಿತ್ಸೆ ಪಡೆದರು. 16 ಜನರಿಗೆ ಚಾಳಿಸು ನೀಡಿ, 28 ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು ಎಂದು ಸಂಘಟಿಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಹನಮಂತ ಗೌಡರ, ಮಹಿಬೂಬ ಬಾಗವಾನ, ಅಲ್ಲಾಭಕ್ಷ ಬಾಗವಾನ, ರಜಾಕ ಕುದರಿ, ಸಲೀಂ ಮೊಮಿನ, ಮಹೀಬೂಬ ಫಣಿಬಂದ, ಯೂನಸ್ ಯಾಳಗಿ, ಡಾ. ನವೀನ, ಡಾ. ಮೇನಕಾ, ಸುನೀಲಕುಮಾರ ಹಾಗೂ ಜಾಮೀಯಾ ಮಸೀದಿ ಕಮಿಟಿ ಸದಸ್ಯರು ಇದ್ದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030