ಹುಲಿಕುಂಟೆ:ಶಕ್ತಿದೇವತೆ ಮಾರಮ್ಮದೇವಿಯ ಸಡಗರದ ಹಬ್ಬ ಆಚರಣೆ
ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದಲ್ಲಿ ಶ್ರೀ ಗೌಸಂದ್ರ ಗ್ರಾಮ ದೇವತೆ ಶ್ರೀ ಮಾರಮ್ಮ ದೇವಿಯ ಜಾತ್ರೆ ಪ್ರತಿ ವರ್ಷ ನಡೆಯುವುದು ವಿಶೇಷ ಜೊತೆಗೆ ಗೌಸಂದ್ರದ ದೊಡ್ಡ ಜಾತ್ರೆಯ ನಂತರ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಪ್ರತಿ ಮಂಗಳವಾರ ಒಂದು ತಿಂಗಳ ಕಾಲ ಮಾರಮ್ಮನ ಹಬ್ಬವನ್ನು ಆಚರಿಸುವ ಪದ್ಧತಿ ಇದೆ ತಾಲೂಕಿನ ಪ್ರಮುಖ ಸಮುದಾಯಗಳಾದ ನಾಯಕ, ಗೊಲ್ಲ, ಉಪ್ಪಾರ, ಹರಿಜನ, ಸೇರಿದಂತೆ ಎಲ್ಲರಿಗೂ ಇಲ್ಲಿನ ಮಾರಮ್ಮ ಶಕ್ತಿ ದೇವತೆ ಹೀಗಾಗಿ ಎಲ್ಲಾ ಸಮುದಾಯದವರು ಪಾಲ್ಗೊಳ್ಳುತ್ತಾರೆ ಮಾರಮ್ಮ ದೇವಿಗೆ ಬಿಸಿಲು ಮಾರಿ, ದುರ್ಗಿ, ಕರಿಮಾರಿ, ಎಂಬ ಹೆಸರುಗಳಿಂದ ಕರೆಯುತ್ತಾರೆ ದೇವಿಯ ಜಾತ್ರೆ ಸಮಯದಲ್ಲಿ ತನ್ನ ಕೆಂಗಣ್ಣಿನಲ್ಲಿ ಶೇಂಗಾ, ಸಜ್ಜೆ, ಜೋಳ, ತೊಗರಿ, ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಬಾಡಿಸಿ ನಂತರ ಸಮೃದ್ಧ ಮಳೆ ತರಿಸುತ್ತಾಳೆ ಎಂಬ ನಂಬಿಕೆ ಎಂದಿಗೂ ಹುಲಿಕುಂಟೆಯ ಗ್ರಾಮದ ಜನರಲ್ಲಿ ಉಳಿದಿದೆ ಇದರಿಂದ ಹುಲಿಕುಂಟೆ ಗ್ರಾಮದಲ್ಲಿ ಪ್ರತಿವರ್ಷ ಸಡಗರದ ಉತ್ಸವ ಆಚರಣೆ ನಡೆಯುವುದು ವಿಶೇಷವಾಗಿದ್ದು ಹುಲಿಕುಂಟೆಯ ಗೌಸಂದ್ರ ಶ್ರೀ ಮಾರಮ್ಮ ದೇವಿ ಭಕ್ತಾದಿಗಳು ಯಾವುದೇ ಬೇದ ಭಾವ ಇಲ್ಲದೆ ಕುರಿ, ಕೋಳಿ ಬಲಿಕೊಟ್ಟು ಭಕ್ತಿ ಮೆರೆದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030