2024 ನೇ ಸಾಲಿನ ಯುವ ಕಾಂಗ್ರೆಸ್ ಚುನಾವಣೆ ರಾಜ್ಯದಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದು ರಾಜೀವ್ ಗಾಂಧಿಯವರ ಕನಸು ಯುವ ಕಾಂಗ್ರೆಸ್ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಸಂಘಟನೆ ಪಕ್ಷದ ಬೇರನ್ನು ಭದ್ರ ಪಡಿಸುವುದಾಗಿತ್ತು,
ಆದರೆ ಇಂದು ಪ್ರಬಾವಿ ರಾಜಕಾರಣಿ ಮತ್ತು ಕೆಎಂಎಫ್ ಅಧ್ಯಕ್ಷ ಮಗನಾಗಿ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಈ ಸಾಮಾನ್ಯ ಚುನಾವಣೆಯು ಹಣದ ಆಮಿಷದ ಚುನಾವಣೆಯಾಗಿದೆ ಸಾಮಾನ್ಯ ಕಾರ್ಯಕರ್ತರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದು ಕಠಿಣವಾಗಿದೆ ಯುವ ಕಾಂಗ್ರೆಸ್ ಚುನಾವಣೆ ಪಾರದರ್ಶಕವಾಗದೆ ಹಣದ ಚುನಾವಣೆಯಾಗಿದೆ ಎಂದು ಎ. ಚಿತ್ರೇಶ್, ಹೊಸಳ್ಳಿ ಬ್ಲಾಕ್ ಕಾಂಗ್ರೆಸ್ ಆಕಾಂಕ್ಷಿಗಳು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ದೂರ ಸಲ್ಲಿಸಿದ್ದು ಅವರು ಸಹ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಯಾರು ಸಹ ಹಣದ ಅಮಿಶಾ ನೀಡಬಾರದೆಂದು ಹಾಗೂ ಇದು ಯುವಕರ ಚುನಾವಣೆ ಯುವಕರೆ ಮಾಡಬೇಕಿದೆ ಇದೇ ರೀತಿ ಹಣ ಬಲದಿಂದ ಚುನಾವಣೆ ಮಾಡಬೇಕಾದರೆ ಮುಂದಿನ ದಿನಗಳಲ್ಲಿ ಯಾವ ಸಾಮಾನ್ಯ ಕಾರ್ಯಕರ್ತರು ಸಹ ಬೆಳೆಯಲು ಸಾಧ್ಯವಿಲ್ಲ ಶೋಷಿತರ, ಧಾರ್ಮಿಕರ, ದೀನದಲಿತರ,ಬಡವರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇದು ಬಂಡವಾಳಶಾಹಿಗಳ ಮತ್ತು ವಂಶ ಪಾರಂಪರ್ಯ ರಾಜಕಾರಣಕ್ಕೆ ಬಲಿಯಾಗುತ್ತಿದೆ ಎಂಬ ಉದ್ದೇಶದಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂದು ಮಂಜುನಾಥ್ ಉಕ್ಕಡದ ಕೂಡ್ಲಿಗಿ ಬ್ಲಾಕ್ ಯುವ ಕಾಂಗ್ರೆಸ್ ಆಕಾಂಕ್ಷೆ ಇವರು ತಿಳಿಸಿದರು…
ವರದಿ,ವೈ ಮಾದೇವ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030