ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಶೋಕಾಚರಣೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ವಿದ್ಯಾರ್ಥಿಗಳ ಆರೋಗ್ಯ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಕ್ಷಣಗಳು.ಶ್ರೀ ಸಾಯಿಬಾಬಾ ಕಿರಿಯ ಪ್ರಾಥಮಿಕ ಶಾಲೆ ಗೊಲ್ಲಲಿಂಗಮ್ಮನಹಳ್ಳಿ ಇಂದು ನಮ್ಮ ಶಾಲೆಯ ಪ್ರಾರ್ಥನಾ ಸಮಯದಲ್ಲಿ ನಿನ್ನೆ ನಡೆದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದ KSTC ಬಸ್ ಮತ್ತು ಲೋಯಲಾ ಶಿಕ್ಷಣ ಸಂಸ್ಥೆಯ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಕಾರಣ ಇಂದು ನಮ್ಮ ಶಾಲೆಯಲ್ಲಿ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಶೋಕಾಚರಣೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳು ಬೇಗ ಗುಣಮುಖರಾಗಲಿ ಎಂದು ಮೌನಚರಣೆಯ ಮೂಲಕ ಭಗವಂತನಲ್ಲಿ ಪ್ರಾರ್ಥಿಸಲಾಯಿತು. ನಮ್ಮ ಶಾಲೆಯ ಸಮಸ್ತ ಸಿಬ್ಬಂದಿ ವರ್ಗ ಹಾಗೂ ಮಕ್ಕಳಲ್ಲಿ ದುಃಖದ ವಾತಾವರಣ ಮತ್ತು ಮುದ್ದು ಪುಟಾಣಿಗಳ ಕಂಬನಿ ಅನುಕಂಪ ಪ್ರೀತಿ ವಾತ್ಸಲ್ಯದ ದೃಶ್ಯಮಯ ಈ ಸಮಯದಲ್ಲಿ ಕಂಡುಬಂದಿತು. ಈ ಸಂದರ್ಭದಲ್ಲಿ ಶ್ರೀ ಸಾಯಿ ಬಾಬಾ ಶಾಲೆಯ ಕಾರ್ಯದರ್ಶಿಗಳಾದ ಮರಿಸ್ವಾಮಿ ಸರ್ ಸಂಸ್ಥೆಯ ಅಧ್ಯಕ್ಷರಾದ ಎನ್ ಕುಮಾರಸ್ವಾಮಿ ಶಾಲೆಯ ಮುಖ್ಯ ಗುರುಗಳಾದ ಎನ್ ಚಿತ್ತಪ್ಪ ಸಹ ಶಿಕ್ಷಕರಾದ ಹುಲುಗಪ್ಪ ಏ ಕೆ ಗಂಗಮ್ಮ ತಾರಾಕ್ಷಿ ತ್ರಿವೇಣಿ ಹಾಗೂ ಶೋಭಾ ಕರಿಬಸಮ್ಮ ಸಿಂಧು ವಿ ಗಂಗಮ್ಮ ವರಲಕ್ಷ್ಮಿ ಮತ್ತು ಮುದ್ದು ಪುಟಾಣಿಗಳು ಭಾಗವಹಿಸಿದ್ದರು…
ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030