ರೈತಸಂಪರ್ಕ ಕೇಂದ್ರಕ್ಕೆ ರಸ್ತೆ ಕೊರತೆ ಮನಗಂಡು ಸಿ. ಸಿ. ರಸ್ತೆ ಕಲ್ಪಿಸಲು ನಿರ್ಧರಿಸಿದೆ.- ಶಾಸಕ ಡಾ. ಶ್ರೀನಿವಾಸ್. ಎನ್. ಟಿ…
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಖಾನ ಹೊಸಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ( ಆರ್.ಎಸ್. ಕೆ) ಸಿ. ಸಿ. ರಸ್ತೆ ಭೂಮಿ ಪೂಜೆಯನ್ನು ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 05-09-24 ರಂದು ನೆರವೇರಿಸಿ ಮಾತನಾಡಿ, *ನಮ್ಮ ಖಾನಹೊಸಹಳ್ಳಿ ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರ ಪ್ರಾರಂಭಗೊಂಡ ನಂತರ ಮುಖ್ಯ ರಸ್ತೆಯಿಂದ ಕಛೇರಿಯವರೆಗೂ ಇಲ್ಲಿ ರಸ್ತೆ ಕೊರತೆ ಇರುವುದನ್ನು ಮನಗಂಡ ಕೂಡಲೇ ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಆಲೋಚಿಸಿದೆ ಎಂದರು.* ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ನನಗೆ ಇರಲಿ. ಖಾನಹೊಸಹಳ್ಳಿ ಹೋಬಳಿಯನ್ನೂ ಒಳಗೊಂಡಂತೆ ಈ ಭಾಗ ಪ್ರತಿ ಹಳ್ಳಿಗಳಿಗೂ ಗುಣಮಟ್ಟದ ರಸ್ತೆ, ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್, ಮತ್ತು ಸ್ವಚ್ಚತೆಗೆ ಆಧ್ಯತೆ ಕೊಡಲಾಗುವುದು ಎಂದೂ ಹೇಳಿದರು. ಈ ವೇಳೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು, ಹೊಸಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಚೇತನ್ ಮತ್ತು ಸರ್ವ ಸದಸ್ಯರು, ಮುಖಂಡರಾದ ಕಾನಾಮಡುಗು ಶಶಿಧರ ಸ್ವಾಮಿ, ಇಮಡಾಪುರ ವೀರಸ್ವಾಮಿ, ಡಿ.ಎಸ್. ಎಸ್. ಮುಖಂಡ ಗಂಗಾಧರ, ಗುಂಡಮುಣುಗು ಗುರುಲಿಂಗಣ್ಣ, ಕಲ್ಲಹಳ್ಳಿ ಉಪ್ಪಾರ ವೆಂಕಟೇಶ, ಲಕ್ಕಜ್ಜಿ ಮಲ್ಲಿಕಾರ್ಜುನ, ಹಿಮಾಮ್ ಸಾಬ್ ಮುಂತಾದವರು ಉಪಸ್ಥಿತರಿದ್ದರು…
ವರದಿ, ಅನಿಲ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030