ಆತಂಕ ಸ್ಥಿತಿಯಲ್ಲಿ ಸಿಡೆಗಲ್ಲು ಜನ; ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಸಮಸ್ಯೆಯನ್ನು ಬಗೆಹರಿಸುವೆ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಆತಂಕ ಸ್ಥಿತಿಯಲ್ಲಿ ಸಿಡೆಗಲ್ಲು ಜನ; ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಸಮಸ್ಯೆಯನ್ನು ಬಗೆಹರಿಸುವೆ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ…

ಕೂಡ್ಲಿಗಿ ಕ್ಷೇತ್ರದ ಸಿಡೆಗಲ್ಲು ಗ್ರಾಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 04-09-24 ರಂದು ಸಿ.ಸಿ. ರಸ್ತೆ ಭೂಮಿಪೂಜೆ ನೆರವೇರಿಸಿದರು. ಶಾಸಕರು, ಸಿಡೆಗಲ್ಲು ಗ್ರಾಮದ ಕುಂದುಕೊರತೆಗಳನ್ನು ಆಲಿಸಿದರು.*ಗ್ರಾಮದ ಜನ ಆತಂಕದಲ್ಲಿದ್ದೂ, ಶಿಥಿಲೀಕರಣಗೊಂಡ ನೀರಿನ ಟ್ಯಾಂಕ್ ಅನ್ನು ಕೂಡಲೇ ಕೆಡವಿ ಅಭಿವೃದ್ಧಿಗೆ ಒತ್ತು ಕೊಡಲು ಶಾಸಕರಲ್ಲಿ ಮನವಿ ಮಾಡಿಕೊಂಡರು.*
*ಶಾಸಕರು ಕೂಡಲೇ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದರು*
ನಿನ್ನೇ ದಿನ *ಕೆ.ಇಬಿ ಅಧಿಕಾರಿಗಳೊಂದಿಗೆ ಕ್ಷೇತ್ರದ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಗಂಭೀರವಾಗಿ ತೆಗೆದುಕೊಂಡು ಚರ್ಚಿಸಿರುವೆ. ನಿಮ್ಮ ಊರಿನಲ್ಲಿ ನೇತು ಬಿದ್ದ ವಿದ್ಯುತ್ ತಂತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದೂ ಗ್ರಾಮಸ್ಥರನ್ನು ಶಾಸಕರು ಎಚ್ಚರಿಸಿದರು*. ಶಿಥಿಲೀಕರಣ ಗೊಂಡ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಒತ್ತುಕೊಡುವೆ. ಬಸ್ಸಿನ ಸಮಸ್ಯೆಯನ್ನು ಬಗೆಹರಿಸುವೆ ಎಂದರು. ಈ ವೇಳೆ ಗ್ರಾ. ಪಂ. ಸದಸ್ಯರಾದ ನಿಂಗಪ್ಪ, ಬಸವರಾಜ ಗೌಡ, ಓಬಯ್ಯ, ಮುಖಂಡರಾದ ಹೊನ್ನೂರು ಸ್ವಾಮಿ, ಕೃಷ್ಣಪ್ಪ, ಚೆನ್ನಪ್ಪ, ಬೆಳ್ಳಗಟ್ಟ ಬಸವರಾಜ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ‌..

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend