ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಸರ್ ಇವರ ಆಸೆಯಂತೆ.ನಮ್ಮ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಸರ್ಕಾರದಿಂದ ಬಂದಂತಹ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಿಂದ ತಾಲೂಕಿನ ಅತ್ಯಂತ ಹಿಂದುಳಿದ ಗ್ರಾಮಾಂತರ ಪ್ರದೇಶ ಮತ್ತು ಎಲ್ಲಾ ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಅಭಿವೃದ್ಧಿಗಾಗಿ ಬಂದಂತಹ ಸರ್ಕಾರದ ಅನುದಾನದ ಕ್ರಿಯಾಯೋಜನೆ ತಯಾರಿಸಲು.ಶಿಕ್ಷಣಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಂಠಿತವಾಗುವಂತಹ ಶಾಲಾ ಕೊಠಡಿಗಳ ಸಮಸ್ಯೆಗಳು ಮತ್ತು ಶೌಚಾಲಯಗಳ ವ್ಯವಸ್ಥೆ ಸರಿಯಾದ ವ್ಯವಸ್ಥೆ ಇಲ್ಲದಿರುವ ಮಾಹಿತಿಯನ್ನು ಪಡೆದು.ಸರ್ಕಾರದಿಂದ ಬಂದಂತಹ ಅನುದಾನವನ್ನು ನಮ್ಮ ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನಮ್ಮ ಜನಪ್ರಿಯ ಶಾಸಕರು ಅಭಿವೃದ್ಧಿಯ ಕಡೆಗೆ ಗಮನ ನೀಡುತ್ತಿದ್ದಾರೆ.ಇದರ ವಿಚಾರವಾಗಿ KKRDB ವಿಭಾಗದಿಂದ ಶಾಲೆಗಳ ನೈಜತೆ ಪರಿಸ್ಥಿತಿ ಮತ್ತು ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಅಭಿಯಂತರರು ಆಗಮಿಸಿದ ಸಂದರ್ಭದಲ್ಲಿ.ನಮ್ಮ ಊರಿನ ಶಾಲೆಯ ಪರಿಸ್ಥಿತಿಗಳ ಬಗ್ಗೆ ಸ್ಥಳೀಯವಾಗಿ ನಾನು ಇವರ ಗಮನಕ್ಕೆ ಮಾಹಿತಿಯನ್ನು ನೀಡಿ, ಮುಂದಿನ ದಿನಗಳಲ್ಲಿ ನಮ್ಮ ಶಾಲೆ ಅಭಿವೃದ್ಧಿ ಆಗಲು ಮನವಿ ಮತ್ತು ಪ್ರಸ್ತಾವನೆ ತಿಳಿಸಲಾಯಿತು…
ವರದಿ, ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030