ವೈಜ್ಞಾನಿಕ ಮನೋಭಾವನೆ ಬೆಳಸಿಕೊಳ್ಳಬೇಕು: ಶಂಕರರಾವ ಕುಲಕರ್ಣಿ
ಬಾದಾಮಿ: ವಿದ್ಯಾರ್ಥಿಗಳು ಮೂಢನಂಬಿಕೆ, ಕಂದಾಚಾರ ಬಿಟ್ಟು, ವೈಜ್ಞಾನಿಕ ಮನೋಭಾವನೆ ಬೆಳಸಿಕೊಳ್ಳಬೇಕು. ಹಿಂದಿನಿಂದ ಬಂದಂತಹ ಸಂಪ್ರದಾಯಗಳನ್ನು ಪ್ರಶ್ನೆ ಮಾಡಬೇಕೆ ಹೊರತು ಕುರುಡು ನಂಬಿಕೆ ಬೆಳಸಿಕೊಳ್ಳಬಾರದು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಲು ನೆಹರೂ ತಾರಾಲಯ ವಿಜ್ಞಾನ ರಸಪ್ರಶ್ನೆ ಹಮ್ಮಿಕೊಂಡಿದೆ ಎಂದು ಪ್ರಭಾರಿ ಪ್ರಾಚಾರ್ಯ ಶಂಕರರಾವ ಕುಲಕರ್ಣಿ ಹೇಳಿದರು.
ಅವರು ಬುಧವಾರ ಸಮೀಪದ ಚಿಕ್ಕಮುಚ್ಚಳಗುಡ್ಡದ ಸರಕಾರಿ ಆದರ್ಶವಿದ್ಯಾಲಯದಲ್ಲಿ ಜವಾಹರಲಾಲ್ ನೆಹರೂ ತಾರಾಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸಾಯಿಟಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಎಲ್ಲವನ್ನು ಪರೀಕ್ಷೆ ಮಾಡಿ ಒಪ್ಪಿಕೊಳ್ಳುವುದು ವಿಜ್ಞಾನ. ವಿದ್ಯಾರ್ಥಿಗಳು ವಿಜ್ಞಾನ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು ಎಂದರು.
ಶಾಲೆಯ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಯ ಮಕ್ಕಳಿಗೆ ನೆಹರೂ ತಾರಾಲಯದ ವತಿಯಿಂದ ವಿಜ್ಞಾನ ರಸಪ್ರಶ್ನೆ ನಡೆಯಿತು
ಶಿಕ್ಷಣ ಸಂಯೋಜಕ ಬಿ.ಟಿ. ಹಳ್ಳಿ ರಸಪ್ರಶ್ನೆ ಕುರಿತು ಮಾತನಾಡಿದರು. ಈ ಸಂದರ್ಭಲ್ಲಿ ಎಸ್.ವೈ. ಮಡಿವಾಳರ, ಶೀಲಾ ಗೌಡರ, ಜೆ.ಎಲ್. ಕಲ್ಲಾಪೂರ, ಬಸವರಾಜ ಸಿಂದಗಿಮಠ, ರಮೇಶ ಕತ್ತಿಕೈ. ಕೀರ್ತಿ ಬಡಿಗೇರ, ಸುರೇಶ ಉಪ್ಪಲದಿನ್ನಿ, ಶಂಭು ಕಂದಗಲ್ಲ, ಬಿ.ವಿ. ಹಳ್ಳದ, ಬಿ.ಎಸ್. ಪಾಟೀಲ, ಪ್ರಮೀಳಾ ಮಹೇಂದ್ರಕರ ಮತ್ತಿತರರು ಇದ್ದರು…
ವರದಿ. ಸಚಿನ್, ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030