ಮಳೆಯನ್ನೇ ನಂಬಿ ಬದುಕುವ ರೈತರ ಅಭಿವೃದ್ಧಿಗೆ ಶ್ರಮಿಸೋಣ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಂಡಿನ ಹೊಳೆಯಲ್ಲಿರುವ ಕೃಷಿ ಬೀಜೋತ್ಪನ ಕೇಂದ್ರದಲ್ಲಿ 2024 -25 ನೇ ಸಾಲಿನ ಜಿಲ್ಲೆ ಮತ್ತು ತಾಲೂಕು ರೈತರ ತರಬೇತಿ ಕಾರ್ಯಕ್ರಮ ಹಾಗೂ ಮುಂಗಾರು ಹಂಗಾಮಿನ ದ್ವೈ- ಮಾಸಿಕ ಕಾರ್ಯಗಾರ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ದಿ. 31-07-24 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಉದ್ಘಾಟಿಸಿದರು. ಶಾಸಕರು ಪಾರಂನ್ನು ಪರಿಶೀಲಿಸಿ, ರೈತರ ಆದಾಯದ ಅನುಕೂಲಕ್ಕಾಗಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಬರುವಂತೆ ತಮ್ಮ ಮನೆಯ ಸಮ್ಮುಖದ ನರ್ಸರಿಗಳಲ್ಲಿ ತೊಗರಿ ಬೀಜವನ್ನು ಸಸಿಬರುವಂತೆ ಸಿದ್ದಪಡಿಸಿಕೊಂಡು ಫಲವತ್ತಾದ ಬೆಳೆಗಳನ್ನು ಬೆಳೆಯಲು ಸಲಹೆಗಳನ್ನು ಅಧಿಕಾರಿಗಳಿಗೆ ನೀಡಿದರು. ನಮ್ಮ ಭಾಗದ ರೈತರು ಮಳೆಯನ್ನೇ ನಂಬಿ ಬದುಕುವುದರಿಂದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಉಪಯುಕ್ತ ಸಲಹೆ ಮತ್ತು ತರಬೇತಿ ನೀಡಲು ತಿಳಿಸಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದಗಲ್ ಇನ್ನು ಅನೇಕ ಕೃಷಿ ಅಧಿಕಾರಿಗಳು ಮತ್ತು ಕಾಯಕಲ್ಪ ಎಫ್. ಪಿ. ಓ. ಹನುಮಂತಪ್ಪ ಕಕ್ಕುಪ್ಪಿ ಮರಬ ವಿರಭದ್ರಪ್ಪ ಕಕ್ಕುಪ್ಪಿ ಕೆ.ಬಿ. ವಿರಭದ್ರಪ್ಪ ಹಾಗೂ , ರೈತರು ಮತ್ತು ಮುಖಂಡರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್. ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030