ರೈತರ ಬೇಡಿಕೆಯಂತೆ ರೈತ ಸಂಪರ್ಕ ಕೇಂದ್ರದ ಭೂಮಿ ಪೂಜೆ ನೆರೆವೇರಿಸಿದ, ಶಾಸಕ, ಡಾ “ಎನ್, ಟಿ,ಶ್ರೀನಿವಾಸ್…!!!

Listen to this article

ರೈತರ ಬೇಡಿಕೆಯಂತೆ ರೈತ ಸಂಪರ್ಕ ಕೇಂದ್ರದ ಭೂಮಿ ಪೂಜೆ ; ರೈತರ ಬದಕು ಹಸನಾದರೇ, ದೇಶ ಸಮೃದ್ಧಿಯಿಂದ ಕೂಡಿರುತ್ತದೆ- ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗುಡೇಕೋಟೆ ಗ್ರಾ. ಪಂ. ಕಾರ್ಯಾಲಯ ಆವರಣದಲ್ಲಿ 2022-23 ನೇ ಸಾಲಿನ ಆರ್‌ .ಕೆ. ವಿ. ವೈ. ಯೋಜನೆ ಅಡಿಯಲ್ಲಿ ನಿರ್ಮಿಸಲಾದ “ ರೈತ ಸಂಪರ್ಕ ಕೇಂದ್ರ ನೂತನ ಕಟ್ಟಡದ ಭೂಮಿಪೂಜೆ”ಯನ್ನು ದಿ. 30-07-24 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ನೆರವೇರಿಸಿ ಮಾತನಾಡಿದರು. ನಮ್ಮಲ್ಲಿ ಗುಡೇಕೋಟೆ ಹೋಬಳಿ ದೊಡ್ಡ ಪ್ರದೇಶವಾಗಿದೆ.‌ ಇಲ್ಲಿನ ಹಳ್ಳಿಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯನ್ನು ಅವಲಂಬಿಸಿದ್ದಾರೆ‌. ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಹಾಗೂ ಪ್ರಾದೇಶಿಕ ಅಸಮಾನತೆ ತಗ್ಗಿಸಲು ರೈತರ ಬಹುದಿನದ ಬೇಡಿಕೆಯಾದ ರೈತ ಸಂಪರ್ಕದ ನೂತನ ಕಟ್ಟಡಕ್ಕೆ ಭೂಮಿಪೂಜೆಯನ್ನು ನಾವು ಎಲ್ಲರೂ ಸೇರಿ ನೆರವೇರಿಸಿರುವುದು ಒಳ್ಳೆಯ ಬೆಳವಣಿಗೆ ಎಂದೂ ಶಾಸಕರು ಹೇಳಿದರು. ರೈತರ ಬದಕು ಹಸನಾದರೇ, ನಮ್ಮ ದೇಶ ಸಮೃದ್ಧಿಯಿಂದ ಕೂಡಿರುತ್ತದೆ. ಹಾಗೆಯೇ ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಲು ಸೂಚಿಸಿದರು. ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳಾದ ಜOಟಿ ಕೃಷಿ ನಿರ್ದೇಶಕರಾದ ಶರಣಪ್ಪ ಮುದಗಲ್ ಸಾಹಾಯಕ ಕೃಷಿ ನಿರ್ದೇಶಕರು ವಾಮದೇವ್ ಕೊಳ್ಳಿ ಶ್ರವಣ್ ಕುಮಾರ್ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದನಗೌಡ ನಿರ್ದೇಶಕರು ಚಂದ್ರಯ್ಯ ಸ್ವಾಮಿ ರೈತ ಸಂಘದ ಜಿಲ್ಲಾ ಕಾರ್ಯಅಧ್ಯಕ್ಷ ಎಂ ಬಸವರಾಜ್ ಕಕ್ಕುಪ್ಪಿ ಹಾಗೂ ಗುಡೇಕೋಟೆ ಗ್ರಾ. ಪಂ. ಅಧ್ಯಕ್ಷರು – ಸದಸ್ಯರು , ರೈತ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend