ಬಿ ರಾಘವೇಂದ್ರ ಇವರಿಗೆ ನ್ಯಾಷನಲ್ ಅಚೀವ್ಮೆಂಟ್ ಗ್ಲೋಬಲ್ ಅವಾರ್ಡ್
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಬಿ. ರಾಘವೇಂದ್ರ ರಿಗೆ. ಮೈಸೂರಿನ ಶ್ರೀಲಕ್ಕಮ್ಮ ದೇವಿ ಕಲಾ ಪೋಷಕ ಸಂಘವು, ರಂಗಭೂಮಿ ಕ್ಷೇತ್ರದಿಂದ ಗುರುತಿಸಿ. ಅವರಿಗೆ “ನ್ಯಾಷನಲ್ ಅಚೀವ್ಮೆಂಟ್ ಗ್ಲೋಬಲ್ ಅವಾರ್ಡ್”, ಪ್ರಶಸ್ತಿ ನೀಡಿ ಗೌರವಿಸಿದೆ. ಜುಲೈ28ರಂದು ಮೈಸೂರಿನ ಕನ್ನಡ ಭವನದಲ್ಲಿ, ಶ್ರೀಲಕ್ಕಮ್ಮದೇವಿ ಕಲಾ ಪೋಷಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ. ರಾಷ್ಟ್ರೀಯ ಜಾನಪದ ಲೋಕೋತ್ಸವ 2024ರ ಕಾರ್ಯಕ್ರಮದಲ್ಲಿ, ನಾಡಿನ ವಿವಿದೆಡೆಯಲ್ಲಿನ ವಿವಿದ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಗಣ್ಯರಿಗೆ. 2024ನೇ ಸಾಲಿನ “ನ್ಯಾಷನಲ್ ಅಚೀವ್ಮೆಂಟ್ ಗ್ಲೋಬಲ್ ” ಪ್ರಶಸ್ಥಿಯನ್ನು, ನೀಡಿ ಸನ್ಮಾನಿಸಿ ಗೌರವಿಸಲಾಗಿದೆ…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030