ಹುಲಿಕುಂಟೆ ಗ್ರಾಮದಲ್ಲಿ ಕರಡಿಗಳ ಉಪಟಳ ಮುಂದುವರೆದಿದ್ದು ಬಿತ್ತಿದ್ದ ಶೇಂಗಾ ಬೀಜ ನಾಶ, ಸಂಕಷ್ಟದಲ್ಲಿ ರೈತ…!!!

Listen to this article

ಹುಲಿಕುಂಟೆ ಗ್ರಾಮದಲ್ಲಿ ಕರಡಿಗಳ ಉಪಟಳ ಮುಂದುವರೆದಿದ್ದು ಬಿತ್ತಿದ್ದ ಶೇಂಗಾ ಬೀಜ ನಾಶ, ಸಂಕಷ್ಟದಲ್ಲಿ ರೈತ
ಗುಡೆಕೋಟೆ:- ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಹುಲಿಕುಂಟೆ ಗ್ರಾಮದ ನಾಗೇಂದ್ರಪ್ಪ ತಂದೆ ಭರಮಪ್ಪ ಇವರು ಎರಡು ಎಕರೆಗೆ ಬಿತ್ತಿದ ಶೇಂಗಾ ಬೀಜ ಕರಡಿಗಳು ಎರಡು ಮೂರು ದಿನಗಳಿಂದ ಬಿತ್ತಿದ್ದ ಶೇಂಗಾ ಬೀಜ ಸಂಪೂರ್ಣವಾಗಿ ತಿಂದು ನಾಶ ಮಾಡಿವೆ,
ರಾತ್ರಿ ಸಮಯದಲ್ಲಿ ಕರಡಿಗಳ ಗುಂಪು ಸಂಪೂರ್ಣವಾಗಿ ಬಿತ್ತಿದ್ದ ಶೇಂಗಾ ಬೀಜ ತಿಂದು ಹಾಕಿದ್ದು, ಅಲ್ಲದೆ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಹಲವು ರೈತರ ಜಮಿನುಗಳಿಗೆ ಕರಡಿ ಮತ್ತು ಕಾಡು ಹಂದಿಗಳು ದಾಳಿ ಮಾಡಿ ಬೆಳೆ ನಾಶ ಮಾಡಿದ್ದಾವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕಾಡು ಪ್ರಾಣಿಗಳು ರಾತ್ರಿ ವೇಳೆ ಜಮೀನುಗಳಿಗೆ ದಾಳಿ ಇಟ್ಟು ಬೆಳೆ ನಾಶಪಡಿಸುವುದನ್ನು ತಪ್ಪಿಸಲು ರೈತರು ಜಮೀನಿಗೆ ತೆರಳಿ ನಿತ್ಯ ರಾತ್ರಿ ಕಾವಲು ಕಾಯುವುದು ಕಾಯಕವಾಗಿದೆ ಇಲ್ಲವಾದರೆ ಬೆಳೆ ಕೈಗೆ ಸಿಗುವುದಿಲ್ಲ ಎಂಬ ಆತಂಕ ರೈತರದ್ದು ರೈತರದ ಸಿದ್ದಪ್ಪ, ಮಲಿಯಪ್ಪ, ಕೆಂಗಪ್ಪ ,ತಳವಾರ್ ಮಾರಪ್ಪ ,ನೀರು ಗಂಟೆ ತಿಪ್ಪೇಸ್ವಾಮಿ, ಗುಂಡಪ್ಪ, ಏಕೆ ಮಾರಪ್ಪ ,ಶಿವಣ್ಣ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಕೈಗೆ ಬಂದ ಬೆಳೆಯು, ನಾಶವಾಗುತ್ತಿರುವುದರಿಂದ ಅರಣ್ಯ ಅಧಿಕಾರಿಗಳು ಕಾಡುಪ್ರಾಣಿಗಳನ್ನು ತಡೆಗಟ್ಟಬೇಕು ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ…

ವರದಿ:- ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend