ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರ ನೇತೃತ್ವದಲ್ಲಿ ಅಶ್ವಿನಿ ಕಣ್ಣಿನ ಆಸ್ಪತ್ರೆ (ಹೊಸಪೇಟೆ) ಇವರ ಸಹಯೋಗದೊಂದಿಗೆ ಪ್ರತಿವಾರದಂತೆ ದಿನಾಂಕ 27.07.2024 ಶುಕ್ರವಾರ ರಂದು ಉಚಿತ ನೇತ್ರ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿತ್ತು.
ಅಂದರ ಬಾಳಿಗೆ ಬೆಳಕಾಗಿ ಅಂದರು ಈ ಸಮಾಜದಲ್ಲಿ ಮತ್ತೊಮ್ಮೆ ಬೆಳಕನ್ನು ಕಾಣಲು ಅಂದತ್ವ ನಿವಾರಣೆಗಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಬದಲಾವಣೆಗೆ ತಾಲೂಕಿನ ನಾನಾ ಗ್ರಾಮಗಳಿಂದ ಕರೆದೊಯ್ದು ಕಣ್ಣಿನ ತೊಂದರೆ ಇರುವ ರೋಗಿಗಳಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸಹಕರಿಸಿದ ಅಶ್ವಿನಿ ಕಣ್ಣಿನ ಆಸ್ಪತ್ರೆ( ಹೊಸಪೇಟೆ) ವ್ಯವಸ್ಥಾಪಕರು ಡಾ. ಶ್ರೀನಿವಾಸ್ ದೇಶಪಾಂಡೆ ಹಾಗೂ ಸಿಬ್ಬಂದಿ ಇದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030