ಆಂದ್ರಪ್ರದೇಶದ ಕಡೆಯಿಂದ ಕರ್ನಾಟಕದ ಸಿರುಗುಪ್ಪ ಪೊಲೀಸ್ ಠಾಣಾ ಸರಹದ್ದಿನ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಡಾ: ಶೋಭಾರಾಣಿ ಐಪಿಎಸ್ ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ, ಹಾಗೂ ಮಾನ್ಯ ಶ್ರೀ ರವಿಕುಮಾರ ಹೆಚ್ಚುವರಿ ಪೊಲಿಸ್ ಅಧೀಕ್ಷಕರು ಬಳ್ಳಾರಿ,ಮಾನ್ಯ ಶ್ರೀ ನವೀನ್ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರಿಗೆ ತಿಳಿಸಿ ಮಾನ್ಯರ ಮಾರ್ಗದರ್ಶನದಲ್ಲಿ ಈ ದಿನ ದಿನಾಂಕ23-07-2024 ರಂದು ಶ್ರೀ.ವೆಂಕಟೇಶ, ಪೊಲೀಸ್ ಉಪಾಧೀಕ್ಷಕರು ಸಿರುಗುಪ್ಪ ಉಪ-ವಿಭಾಗ, ಹಾಗೂ ವೈ.ಎಸ್.ಹನುಮಂತಪ್ಪ, ಸಿಪಿಐ ಸಿರುಗುಪ್ಪ ವೃತ್ತ,ಪರಶುರಾಮ ಪಿಎಸ್ಐ ಹಚ್ಚೊಳ್ಳಿ ಹಾಗೂ ಸಿರುಗುಪ್ಪ ಠಾಣೆಯ ಹೊನ್ನಪ್ಪ, ಪಿ.ಎಸ್.ಐ(ತನಿಖೆ), ಈಶ್ವರಪ್ಪ, ಎ.ಎಸ್.ಐ, ಸಿಬ್ಬಂದಿಗಳಾದ ಶಂಕ್ರಪ್ಪ, ಹೆಚ್.ಸಿ-24, ಚಿನ್ನಪ್ಪ ಹೆಚ್.ಸಿ-171 ಬಸವರಾಜ, ಪಿಸಿ-630, ವಿಷ್ಣುಮೋಹನ್, ಪಿಸಿ-1202, ಬಾಲಚಂದ್ರ ರಾಥೋಡ್ ಪಿಸಿ-1197, ಈರಣ್ಣ, ಪಿಸಿ-105 ರವರುಗಳೊಂದಿಗೆ ಸಿರುಗುಪ್ಪ-ಆದೋನಿ ರಸ್ತೆಯಲ್ಲಿರುವ ಎ.ಆರ್.ಎಸ್ ಫಾರ್ಮ್ ಹತ್ತಿರ ಆದೋನಿ ಕಡೆಯಿಂದ ಎರಡು ದ್ವಿಚಕ್ರ ವಾಹನಗಳಾದ TVS NORQ ಮೋಟಾರ್ ಸೈಕಲ್ ಹಾಗೂ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂಬರ್ ಕೆಎ.34/ಇಟಿ.6594 ನೇದ್ದವುಗಳಲ್ಲಿ ಬರುತ್ತಿದ್ದ ಬಳ್ಳಾರಿಯ ಶರ್ಮಾಸ್ ವಲಿ, ಶೈಲೇಂದ್ರ, ಶೇಖ್ ಹಬೀದ್, ಬಲರಾಮ, ಕಾರ್ತಿಕ್ ಎಂಬುವವರಿಂದ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಒಣ ಗಾಂಜಾ ಇದರ ಒಟ್ಟು ತೂಕ ಅಂದಾಜು 05 ಕೆ.ಜಿ 350 ಗ್ರಾಂ ಗಾಂಜಾ ಇದರ ಅಂದಾಜು ಬೆಲೆ 2,65,000/-(ಎರಡು ಲಕ್ಷ ಅರವತ್ತೈದು ಸಾವಿರ)ಗಳಷ್ಟು ಮೌಲ್ಯದ ಗಾಂಜವನ್ನು ವಶಪಡಿಸಿಕೊಂಡು ಈ ಬಗ್ಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.
ಮಾನ್ಯ ಡಾ: ಶೋಭಾರಾಣಿ ಐಪಿಎಸ್ ಪೊಲೀಸ್ ಅಧೀಕ್ಷಕರು ಬಳ್ಳಾರಿ ಜಿಲ್ಲೆ ರವರು ಅಕ್ರಮ ಗಾಂಜಾ ಸಾಗಾಣಿಕೆದಾರರ ಮೇಲೆ ದಾಳಿ ಮಾಡಿ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ….
ವರದಿ. ಉಮೇಶ್, ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030